- Advertisement -
- Advertisement -
ಮಂಗಳೂರು: ಹಣತೆ ವ್ಯಾಪಾರಿ ತಮಿಳುನಾಡು ಸೇಲಂ ನಿವಾಸಿ ಮಾಯವೇಳ್ ಪೆರಿಯಸಾಮಿ (52) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂದರು ಪೊಲೀಸರು ಮತ್ತೋರ್ವ ಆರೋಪಿ ಮೂರ್ತಿ (45)ಯನ್ನು ಬಂಧಿಸಿದ್ದಾರೆ
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹೂವಿನಹಡಗಲಿಯ ರವಿ ಅಲಿಯಾಸ್ ವಕೀಲ್ ನಾಯ್ಕನನ್ನು ಬಂಧಿಸಲಾಗಿತ್ತು
ವಕೀಲ್ ನಾಯ್ಕನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೂರ್ತಿ ಕೂಡ ಕೊಲೆ ಕೃತ್ಯದಲ್ಲಿ ಪಾಲ್ಗೊಂಡಿದ್ದ. ವ್ಯಾಪಾರಿ ಪೆರಿಯಸಾಮಿ ಬಳಿ ಹಣವಿರಬಹುದು ಎಂದು ಭಾವಿಸಿದ್ದ ಆರೋಪಿಗಳು ಕೊಲೆ ಮಾಡಿದ್ದರು. 45 ದಿನಗಳ ಬಳಿಕ ಮೃತದೇಹ ಪತ್ತೆಯಾಗಿತ್ತು.
- Advertisement -