Friday, June 27, 2025
Homeತಾಜಾ ಸುದ್ದಿಫ್ರೀ ಬಸ್ ನಿಲ್ಲಿಸಲಿಲ್ಲ ಎಂದು ಬಸ್ ಗೆ ಕಲ್ಲೆಸೆದ ಮಹಿಳೆ ; ಫ್ರೀ ಪ್ರಯಾಣಕ್ಕೆ ಏನೋ...

ಫ್ರೀ ಬಸ್ ನಿಲ್ಲಿಸಲಿಲ್ಲ ಎಂದು ಬಸ್ ಗೆ ಕಲ್ಲೆಸೆದ ಮಹಿಳೆ ; ಫ್ರೀ ಪ್ರಯಾಣಕ್ಕೆ ಏನೋ ಮಾಡಲು ಹೋಗಿ 5 ಸಾವಿರ ದಂಡ ತೆತ್ತ ನಾರಿ ಮಣಿ

spot_img
- Advertisement -
- Advertisement -

ಕೊಪ್ಪಳ: ಫ್ರೀ ಪ್ರಯಾಣಕ್ಕೆ ಬಸ್ ನಿಲ್ಲಿಸಿಲ್ಲ ಎಂದು ಮಹಿಳೆಯೊಬ್ಬರು ಸರಕಾರಿ ಬಸ್ ಗೆ ಕಲ್ಲು ಎಸೆದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಡೆದಿದೆ.ಇಳಕಲ್ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬ ಮಹಿಳೆ ಕಲ್ಲೆಸಿದ್ದಾರೆ.

ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ವೇಗದೂತ ಬಸ್ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿತ್ತು.ಬಸ್‌ನ ಚಾಲಕ ಕಲ್ಲು ಎಸೆದ ಮಹಿಳೆಯನ್ನು ಮುನಿರಾಬಾದ್‌ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.ಪೊಲೀಸರು ಮಹಿಳೆಯಿಂದ 5 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳೆ, ನನ್ನ ಮುಂದೆ ಹಲವು ಬಸ್‌ಗಳು ಹೋಗಿದೆ.ಯಾರೂ ಕೂಡ ನಿಲ್ಲಿಸಿಲ್ಲ.ಮಳೆ ಕೂಡ ಬರುತ್ತಿತ್ತು.ಇಳಕಲ್‌ಗೆ ಹೋಗುವ ಬಸ್‌ಗಾಗಿ ಮಳೆಯಲ್ಲಿ ನಾಲ್ಕೈದು ತಾಸು ಕಾದು ಕುಳಿತಿದ್ದೆ.ಇದರಿಂದ ಕೋಪಗೊಂಡು ಕಲ್ಲು ಎಸೆದಿರುವುದಾಗಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!