- Advertisement -
- Advertisement -
ಮೈಸೂರು: ಪಕ್ಕದ ಮನೆಯ ಹುಡುಗ ಚುಡಾಯಿಸಿದನೆಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನ ಕಲ್ಲಹಳ್ಳಿಯಲ್ಲಿ ನಡೆದಿದೆ.
ಜಯಶ್ರೀ ಎಂಬ ಮಹಿಳೆಯನ್ನು ಪಕ್ಕದ ಮನೆಯ ಯುವಕ ಮಂಜು ಎಂಬಾತ ಆಗಾಗ ಚುಡಾಯಿಸುತ್ತಿದ್ದ. ಇದರಿಂದ ಮನನೊಂದ ಜಯಶ್ರೀ 18 ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಜಯಶ್ರೀ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -