Friday, April 19, 2024
Homeಕರಾವಳಿಕಡಬ:ಅಡಿಕೆ ಹೆಕ್ಕಲು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಗೆ ಬಿದ್ದು ಸಾವು

ಕಡಬ:ಅಡಿಕೆ ಹೆಕ್ಕಲು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಗೆ ಬಿದ್ದು ಸಾವು

spot_img
- Advertisement -
- Advertisement -

ಕಡಬ:  ಅಡಿಕೆ ಹೆಕ್ಕಲು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಡಬ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ಯ ಗ್ರಾಮದಲ್ಲಿ ನಡೆದಿದೆ.

ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಬಲ್ಯ ಗ್ರಾಮದ ಗೋವಿಂದ ಕಟ್ಟೆಯ ದಿವಂಗತ ಸುಬ್ಬಣ್ಣ ಭಟ್  ಅವರ ಪತ್ನಿ ದೇವಕಿ(77ವ) ಮೃತಪಟ್ಟವರು.

ದೇವಕಿಯವರು  ಅಡಿಕೆ ಹೆಕ್ಕಲು ಮತ್ತು ಇತರೆ ಕೆಲಸಕ್ಕೆ ಒಮ್ಮೊಮ್ಮೆ  ತೋಟಕ್ಕೆ ಹೋಗಿ ಬರುತ್ತಿದ್ದರು. ನ.25 ರಂದು ಕೂಡ ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ.  ತೋಟದ ಕಾರ್ಮಿಕ ಕೆಲಸ ಮಾಡುತ್ತಿದ್ದಾಗ ಅವರ ಮೃತ ದೇಹವು ಕೆರೆಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಮನೆಯವರಿಗೆ ಈ ವಿಷಯ ತಿಳಿಸಿದ್ದು ಬಳಿಕ ನೀರಿನಿಂದ ಮೇಲೆತ್ತಿ ನೋಡಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ.

ಈ ಬಗ್ಗೆ ಮೃತರ ಮಗ  ಕುನಾಲು ಶಾಲೆಯಲ್ಲಿ ಶಿಕ್ಷಕರಾಗಿರುವ ಶಿವಕುಮಾರ್ ಎನ್.ಜಿ ಅವರು ನೀಡಿದ ದೂರಿನಂತೆ   ಕಡಬ ಠಾಣೆಯಲ್ಲಿ    ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!