ಕಾರ್ಕಳದ ಹಿರ್ಗಾನ ಕುಂದೇಶ್ವರ ದೇವಸ್ಥಾನದ ವತಿಯಿಂದ ನೀಡಲಾಗುವ ‘ಶ್ರೀ ಕುಂದೇಶ್ವರ ಸಮ್ಮಾನ್’ ಪ್ರಶಸ್ತಿಗೆ ‘ಯಕ್ಷಗಾನ ಗಂಧರ್ವ’ ರಾಘವೇಂದ್ರ ಮಯ್ಯ ಹಾಲಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಜನವರಿ 23ರಂದು ಸಂಜೆ 6 ಗಂಟೆಗೆ ನಡೆಯುವ ದೇವಸ್ಥಾನದ ಉತ್ಸವದಲ್ಲಿ ಸಾಂಕೇತಿಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರಾಘವೇಂದ್ರ ಮಯ್ಯ ಹಾಲಾಡಿ ಯಕ್ಷಗಾನದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಅಭಿಮಾನಿಗಳ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕಾಳಿಂಗ ನಾವಡರ ಸವಿನೆನಪಿನಲ್ಲಿ ಯಕ್ಷಗಾನ ಕಲೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 15ನೇ ವಯಸ್ಸಿನಲ್ಲಿಯೇ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದರು.
9ನೇ ತರಗತಿಯಲ್ಲಿ ಓದುವುದನ್ನು ಬಿಟ್ಟು ಉಪ್ಪೂರಿನಲ್ಲಿ ಯಕ್ಷಗಾನ ತರಬೇತಿ ಪಡೆದರು. ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಕಲಿತರು. ಅವರು ಉಪ್ಪೂರಂದರೊಂದಿಗೆ ಅಮೃತೇಶ್ವರ ಮೇಳದಲ್ಲಿ ಸಂಗೀತಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಹಾಡಿದ ಹಾಡುಗಳನ್ನು ಹಲವಾರು ಜನರು ಮೊಬೈಲ್ ಫೋನ್ ರಿಂಗ್ಟೋನ್ಗಳಾಗಿ ಬಳಸುತ್ತಾರೆ ಅದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.