- Advertisement -
- Advertisement -
ಮಡಿಕೇರಿ: ಕೆಎಸ್ ಆರ್ ಟಿಸಿ ಬಸ್ ಒಂದು ಮೂರು ದಿನಗಳಿಂದ ರಸ್ತೆ ಮಧ್ಯೆ ಕೆಟ್ಟು ನಿಂತಿದೆ. ಬಸ್ ಕೆಟ್ಟು ಹೋಗಿ ಮೂರು ದಿನ ಕಳೆದರೂ ಕೆಎಸ್ ಆರ್ ಟಿಸಿ ಸಂಸ್ಥೆ ಇನ್ನೂ ಕೂಡಾ ಸ್ಥಳದಿಂದ ಬಸ್ ಕೊಂಡೊಯ್ದಿಲ್ಲ.

ರಸ್ತೆಯಲ್ಲಿ ನಿಂತಿರುವ ಬಸ್ ನಿಂದಾಗಿ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ- ಶನಿವಾರಸಂತೆ ರಸ್ತೆಯಲ್ಲಿ ಕರ್ನಾಟಕ ಸಾರಿಗೆ ಬಸ್ ಕೆಟ್ಟು ನಿಂತಿದೆ.
ಇನ್ನೂ ಕೂಡಾ ಸ್ಥಳದಲ್ಲೇ ಬಸ್ ಬಾಕಿಯಾಗಿರುವುದು ಸಾರಿಗೆ ಸಂಸ್ಥೆಯ ಕಾರ್ಯನಿರ್ವಹಣೆಯನ್ನೇ ಪ್ರಶ್ನೆ ಮಾಡುವಂತಿದೆ.
- Advertisement -