Monday, May 20, 2024
Homeಕರಾವಳಿಮಂಗಳೂರು ಡಿಸಿ ಆದೇಶಕ್ಕೆ ಮರು ಸ್ಪಷ್ಟನೆ ಕೊಟ್ಟ ಕೋಟ ಶ್ರೀನಿವಾಸ್ ಪೂಜಾರಿ: ಜಿಲ್ಲೆಯಲ್ಲಿ ಸಮಾರಂಭಗಳಿಗೆ...

ಮಂಗಳೂರು ಡಿಸಿ ಆದೇಶಕ್ಕೆ ಮರು ಸ್ಪಷ್ಟನೆ ಕೊಟ್ಟ ಕೋಟ ಶ್ರೀನಿವಾಸ್ ಪೂಜಾರಿ: ಜಿಲ್ಲೆಯಲ್ಲಿ ಸಮಾರಂಭಗಳಿಗೆ ನಿರ್ಬಂಧವಿಲ್ಲವೆಂದ ಉಸ್ತುವಾರಿ ಸಚಿವರು

spot_img
- Advertisement -
- Advertisement -

ಮಂಗಳೂರು : ಕೋವಿಡ್ 19 ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ದೃಷ್ಟಿಯಿಂದ ದ. ಕ ಜಿಲ್ಲಾಧಿಕಾರಿಯವರು ಹೊರಡಿಸಿರುವ ಆದೇಶಕ್ಕೆ ಸಾರ್ವಜನಿಕರು ಆತಂಕ ವ್ಯಕ್ತ ಪಡಿಸಿದ್ದರು. ಈ ಬಗ್ಗೆ ಮರು ಸ್ಪಷ್ಟನೆ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿರುವುದಾಗಿ ದ. ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಯಕ್ಷಗಾನ, ಕೋಲಾ, ನೇಮ, ಪೂಜೆ, ಜಾತ್ರೆ ಮತ್ತು ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳು ಕೋವಿಡ್ 19 ನಿಯಮಪಾಲನೆಯೊಂದಿಗೆ ನಡೆಸಬಹುದಾಗಿದೆ ಎಂದು ದ. ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದಾರೆ.

ಬಯಲು ಮೈದಾನ ಪ್ರದೇಶಗಳಲ್ಲಿ ಗರಿಷ್ಟ 500 ಕ್ಕಿಂತ ಜಾಸ್ತಿ ಜನ ಸೇರುವಂತಿಲ್ಲ ಕಡ್ಡಾಯವಾಗಿ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

- Advertisement -
spot_img

Latest News

error: Content is protected !!