- Advertisement -
- Advertisement -
ಬೆಂಗಳೂರು;ನಿನ್ನೆಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ ಕಾರ್ಯನಿರ್ವಹಿಸುವ ಕಲ್ಯಾಣ ಕೇಂದ್ರಕ್ಕೆ ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿ ದೂರು ದುಮ್ಮಾನಗಳ ಕುರಿತು ಸ್ವತಃ ಕರೆ ಸ್ವೀಕರಿಸಿ ಮಾತನಾಡಿದರು.
ಈ ವೇಳೆ ಸಮಸ್ಯೆಗಳ ಪರಿಹಾರಕ್ಕೆ ಆದೇಶಿಸಿದರು. ಕ್ಷಣ ಕ್ಷಣಕ್ಕೂ ಬರುತ್ತಿರುವ ಹಲವಾರು ಕರೆಗಳಿಗೆ ಸಚಿವರ ಸ್ಪಂದನೆ ಮತ್ತು ಪರಿಹಾರ ಸಾರ್ವಜನಿಕರಿಗೆ ಮತ್ತು ಇಲಾಖೆಯ ಸಿಬ್ಬಂದಿಗೆ ಉತ್ಸಾಹ ತುಂಬಿದಂತಾಯಿತು.
- Advertisement -