Monday, April 29, 2024
Homeಕರಾವಳಿಕೇರಳದ ವ್ಯಕ್ತಿಗೆ ಕಸದ ಬುಟ್ಟಿಯಲ್ಲಿ ಖುಲಾಯಿಸಿದ ಅದೃಷ್ಟ : ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾನ್ ವಾಲಾ

ಕೇರಳದ ವ್ಯಕ್ತಿಗೆ ಕಸದ ಬುಟ್ಟಿಯಲ್ಲಿ ಖುಲಾಯಿಸಿದ ಅದೃಷ್ಟ : ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾನ್ ವಾಲಾ

spot_img
- Advertisement -
- Advertisement -

ಕೇರಳ: ಅದೃಷ್ಟ ಅನ್ನೋದು ಯಾವಾಗ ಯಾರನ್ನು ಹೇಗೆ ಕೈ ಹಿಡಿಯುತ್ತದೆ ಎಂದು ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಇದೇ ರೀತಿ ಕೇರಳದ ಕೊಟ್ಟಾಯಂನ ವ್ಯಕ್ತಿಯೊಬ್ಬರ ಬಾಳಲ್ಲಿ ಅದೃಷ್ಟ ಮ್ಯಾಜಿಕ್ ಮಾಡಿದೆ.

ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಬಳಿ ಪಾನ್ ಶಾಪ್ ಹೊಂದಿರುವ ಚಂದ್ರ ಬಾಬು ಎಂಬವರಿಗೆ ಕಸದ ಬುಟ್ಟಿಯಲ್ಲೊಂದು ಲಾಟರಿ ಟಿಕೆಟ್ ಸಿಕ್ಕಿದೆ. ಅದೇ ಲಾಟರಿ ಟಿಕೆಟ್ ಮೂಲಕ ಪಾನ್ ವಾಲಾ ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾರೆ.

ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಬಳಿ ಪಾನ್ ಶಾಪ್ ಹೊಂದಿರುವ ಚಂದ್ರ ಬಾಬು, ಕಳೆದ 40 ವರ್ಷಗಳಿಂದ ವೈದ್ಯಕೀಯ ಕಾಲೇಜು ಪ್ರದೇಶದ ಸುತ್ತಲೂ ವಿವಿಧ ಕೆಲಸಗಳನ್ನು ಮಾಡುತ್ತಿದ್ದಾರೆ. ಸದ್ಯ ಅವರಿಗೆ ಬಂದಿರುವ ಹಣದಿಂದ ಒಂದು ಮನೆ ಮತ್ತು ಐದು ಸೆಂಟ್ಸ್ ಜಾಗ ಹೊಂದುವ ಕನಸು ಹೊಂದಿದ್ದಾರೆ.

- Advertisement -
spot_img

Latest News

error: Content is protected !!