Saturday, June 6, 2026
Homeಅಪರಾಧಪುತ್ತೂರಿನ ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಲು ಕೆ.ಪಿ. ನಂಜುಂಡಿ ಮಂಗಳೂರಿಗೆ ಭೇಟಿ; ಪ್ರಭಾವಿ ವ್ಯಕ್ತಿಗಳನ್ನ ಭೇಟಿಯಾಗಿ ಮನವಿ...

ಪುತ್ತೂರಿನ ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸಲು ಕೆ.ಪಿ. ನಂಜುಂಡಿ ಮಂಗಳೂರಿಗೆ ಭೇಟಿ; ಪ್ರಭಾವಿ ವ್ಯಕ್ತಿಗಳನ್ನ ಭೇಟಿಯಾಗಿ ಮನವಿ ಮಾಡಲಿರುವ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ

- Advertisement -
- Advertisement -

ಮಂಗಳೂರು: ಪುತ್ತೂರಿನ ಯುವತಿಯೊಬ್ಬಳು ಪ್ರೀತಿಸಿದ ಯುವಕನಿಂದಲೇ ಅತ್ಯಾಚಾರಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿದ  ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ವಿಶ್ವಕರ್ಮ ಅವರು ಆಗಸ್ಟ್‌ 1, ಶುಕ್ರವಾರದಂದು ಮಂಗಳೂರು ಹಾಗೂ ಪುತ್ತೂರಿಗೆ ಭೇಟಿ ನೀಡಲಿದ್ದಾರೆ. 

ಈಗಾಗಲೇ ಹಲವು  ಗಣ್ಯರು ಈ ಪ್ರಕರಣಕ್ಕೆ ಬೆಂಬಲವಾಗಿ ನಿಂತಿದ್ದು,  ಕೆ.ಪಿ. ನಂಜುಂಡಿ ಅವರ ಭೇಟಿಯ ಉದ್ದೇಶವು ಪ್ರಕರಣದಲ್ಲಿ ಸಂತ್ರಸ್ತೆ ಪರವಾಗಿ ಮಧ್ಯಸ್ಥಿಕೆ ವಹಿಸಿ ನ್ಯಾಯ ಒದಗಿಸುವುದಾಗಿದೆ. ಇದಕ್ಕಾಗಿ ಅವರು ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನ ಭೇಟಿ ಮಾಡಿ ಮನವಿಯನ್ನು ಮಾಡುತ್ತಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

- Advertisement -

Latest News

error: Content is protected !!