- Advertisement -
![]()
- Advertisement -
ಮಂಗಳೂರು; ನಿನ್ನೆಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಕರಾವಳಿಯ ಮಂದಿ ನಲುಗಿ ಹೋಗಿದ್ದಾರೆ.ಎಲ್ಲಿ ನೋಡಿದರೂ ಬರೀ ನೀರೇ ಎಂಬಂತಾಗಿದೆ. ಬಹುತೇಕ ನದಿಗಳು, ಹಳ್ಳ, ಕೊಳ್ಳಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದೆ.
ಹತ್ತಾರು ವರ್ಷಗಳಿಂದ ಮುಳುಗಡೆಯಾಗದ ಅದೆಷ್ಟೋ ಸೇತುವೆಗಳು ಈ ಮಳೆಗೆ ಮುಳುಗಡೆಯಾಗಿದ್ದು, ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ನಾಳೆ ಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣಕನ್ನಡ ಡಿಸಿ ಮುಲ್ಲೈ ಮುಹಿಲನ್ ಆದೇಶ ನೀಡಿದ್ದಾರೆ.
- Advertisement -


