- Advertisement -
- Advertisement -
ನವದೆಹಲಿ: ರಾಜ್ಯಸಭೆಯ ಸಭಾ ನಾಯಕರಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಆರೋಗ್ಯ ಮತ್ತು ರಾಸಾಯನಿಕ, ರಸಗೊಬ್ಬರ ಖಾತೆ ಸಚಿವ ಜಗತ್ ಪ್ರಕಾಶ್ ನಡ್ಡಾ ಸೋಮವಾರ ನೇಮಕವಾಗಿದ್ದಾರೆ.
ಈ ಮೊದಲು ರಾಜ್ಯಸಭೆಯಲ್ಲಿ ಸಭಾ ನಾಯಕರಾಗಿ ಪಿಯೂಷ್ ಗೋಯಲ್ ನಿರ್ವಹಿಸಿದ್ದರು.
ಜೆ.ಪಿ.ನಡ್ಡಾ ಕೇಂದ್ರ ಸಚಿವ ಸಂಪುಟಕ್ಕೆ ಸೇರಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮಾತುಗಳು ಕೇಳಿ ಬರುತ್ತಿದೆ. ಅಮಿತಾ ಶಾ ಬಳಿಕ 2020ರಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ್ದರು.
- Advertisement -