Thursday, April 25, 2024
Homeತಾಜಾ ಸುದ್ದಿಸಾವಿಗೂ ಮುನ್ನ ಪತ್ರ ಬರೆದಿದ್ದ ನಟಿ ಜಯಶ್ರೀ ರಾಮಯ್ಯ : ಅವರು ಬರೆದ ಪತ್ರದಲ್ಲಿ ಏನಿತ್ತು?

ಸಾವಿಗೂ ಮುನ್ನ ಪತ್ರ ಬರೆದಿದ್ದ ನಟಿ ಜಯಶ್ರೀ ರಾಮಯ್ಯ : ಅವರು ಬರೆದ ಪತ್ರದಲ್ಲಿ ಏನಿತ್ತು?

spot_img
- Advertisement -
- Advertisement -

ಬೆಂಗಳೂರು : ಬಿಗ್ ಬಾಸ್ ಸೀಸನ್ 3 ರಲ್ಲಿ ಸ್ಪರ್ಧಿಯಾಗಿ ರಾಜ್ಯದ ಮನೆ ಮನಗಳಲ್ಲಿ ಹೆಸರುವಾಸಿಯಾಗಿದ್ದ ಚೆಲುವೆ ಜಯಶ್ರೀ ರಾಮಯ್ಯ, ಇದೀಗ ನೆನಪಷ್ಟೇ. ಆಕೆಯ ಸಾವಿಗೆ ಇಡೀ ರಾಜ್ಯವೇ ಮರುಗುತ್ತಿದೆ. ಹೀಗಿರುವಾಗ ಆಕೆ ಸಾವಿಗೂ ಮುನ್ನ ಬರೆದಿರುವ ಪತ್ರವೊಂದು ಸಿಕ್ಕಿದೆ.

ಹೌದು.. ಆಕೆ ಬರೆದಿರುವ ಪತ್ರದಲ್ಲಿ ಅನೇಕ ವಿಚಾರಗಳ ಬಗ್ಗೆ ಪಶ್ಚಾತಾಪ ಹೊರಹಾಕಿದ್ದಾರೆ. “ನಾನು ಚಿಕ್ಕ ವಯಸ್ಸಿನಿಂದಲೂ ಖಿನ್ನತೆಯಿಂದ ಬಳಲುತ್ತಿದ್ದೇನೆ. ನನ್ನ ಮಾವ ಹಾಗೂ ಕುಟುಂಬಸ್ಥರ ಸಲಹೆಗಳನ್ನ ಸ್ವೀಕರಿಸುವಲ್ಲಿ ವಿಫಲಳಾದೆ. ನನ್ನ ಮಾವನನ್ನು ನಾನು ಸಮಸ್ಯೆಗೆ ದೂಡಿದ್ದೆ. ಅವರ ವಿರುದ್ಧ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿದೆ. ನಾನು ಕೋಪದ ಭಾವನೆಯಿಂದ ಅವರ ಮೇಲೆ ಸುಳ್ಳು ಆರೋಪಗಳನ್ನ ಮಾಡಿದೆ.

ಅಷ್ಟೆ ಅಲ್ಲ. ಅವರ ಹೆಸರನ್ನು ಕೆಡಿಸಲು ಪ್ರಯಯತ್ನಿಸಿ ನಾನೇ.. ನನ್ನ ಹೆಸರು ಕೆಡಿಸಿಕೊಂಡೆ, ನನ್ನ ಸಮಸ್ಯೆಗಳಿಗೆ ಅವರು ಎಂದಿಗೂ ಕಾರಣವಾಗುವುದಿಲ್ಲ. ನಾನು ಮತ್ತೆ ಸಮಸ್ಯೆಗಳಿಗೆ ಸಿಲುಕುವುದಿಲ್ಲ. ಒಳ್ಳೆಯ ರೀತಿ ಬದುಕುವುದಕ್ಕೆ ಇದು ನನಗೆ ಕೊನೆಯ ಅವಕಾಶ. ಅವರು ನನಗೆ ಮತ್ತೆ ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದರು. ನನ್ನ ಕೋಪ, ಹತಾಶಭಾವ, ಅತೀ ಹೆಚ್ಚು ಯೋಚಿಸುತ್ತಿದ್ದ ಕಾರಣ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡಿದ್ದೇನೆ. ನನ್ನ ಬೆಳವಣಿಗೆ ಹಾಗೂ ವೈಫಲ್ಯಗಳಿಗೆ ನಾನೇ ಕಾರಣ ಕ್ಷಮಿಸಿ ಬಿಡಿ -ಇಂತಿ ಜಯಶ್ರೀ ಗೌಡ ಎಲ್ ಎಂದು ಒಂದು ಪತ್ರದಲ್ಲಿ ಬರೆದುಕೊಂದಿದ್ದಾರೆ”.

ನಾನು ಮದುವೆಯಾಗುತ್ತೇನೆ. ಹೊಸ ಜೀವನ ನಡೆಸುತ್ತೇನೆ ಎಂದು ಹೇಳಿಕೊಂಡಿದ್ದ ಜಯಶ್ರೀ ಜನವರಿ 14 ರಂದು ಪುನರ್ವಸತಿ ಕೇಂದ್ರದಿಂದ ಹೊರಹೋಗಿದ್ದು, ಮತ್ತೆ ಜನವರಿ 20 ರಂದು ವಾಪಸ್ ಬಂದಿದ್ದರು. ಸಾವಿಗೂ ಕೆಲ ದಿನಗಳ ಮುನ್ನ ಯೋಗ ಧ್ಯಾನ ನೃತ್ಯಾಭ್ಯಾಸಗಳನ್ನ ಮಾಡುತ್ತಿದ್ದರು. ಆದರೂ ಸಹ ಖಿನ್ನತೆಯಿಂದ ಒಂಟಿತನವನ್ನು ಬಯಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!