Monday, May 6, 2024
Homeಕರಾವಳಿಮುಗೇರಡ್ಕ: ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ಮುಗೇರಡ್ಕ: ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

spot_img
- Advertisement -
- Advertisement -

ಮುಗೇರಡ್ಕ: ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ – ಮುಗೇರಡ್ಕ ಇದರ ವತಿಯಿಂದ ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಇದರ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರಗಿತು.

ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜ ಗಿಡ ನೆಡುವುದರ ಮೂಲಕ ಗಿಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿ ತಾಲೂಕಿನಲ್ಲಿ ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಹಲವು ರೀತಿಯ ಕಷ್ಟ-ನಷ್ಟ ಉಂಟಾಗಿದೆ. ಇಂತಹ ಪ್ರಕೃತಿ ವಿಕೋಪಗಳು ಎದುರಿಸಬೇಕಾದರೆ ನಾವು ನಮ್ಮ ಪ್ರಕೃತಿ ಪರಿಸರವನ್ನು ರಕ್ಷಿಸಬೇಕು.ಅದಕ್ಕಾಗಿ ಗಿಡಗಳನ್ನು ನೆಡುವ ಕಾರ್‍ಯಮಾಡಬೇಕು. ವನಮಹೋತ್ಸವ ಕಾರ್ಯಕ್ರಮ ಪ್ರಕೃತಿ ರಕ್ಷಣೆಗೆ ಮಾದರಿಯಾಗಿ ರೂಪುಗೊಳ್ಳನಬೇಕು ಎಂದರು.

ಭಾಗವಹಿಸಿದ ಎಲ್ಲರಿಗೂ ಗಿಡವನ್ನು ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಹಸ್ತಾಂತರಿಸಲಾಯಿತು. ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿಯ ಗೌರವಾಧ್ಯಕ್ಷ, ಶ್ರೀ ಉದಯ ಭಟ್, ಕೊಳಬ್ಬೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಮುಖ್ಯ ಅತಿಥಿಗಳಾಗಿ ಬಾರ್ಯ ಸಿಎ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಗೌಡ ಕೈಕುರೆ, ಬಂದರು ಗಸ್ತಿನ ಅರಣ್ಯ ರಕ್ಷಕ ಶ್ರೀ ಕೆ. ಎನ್. ಜಗದೀಶ್, ಶ್ರೀ ಮಾರುತಿ, ಜಿ.ಇ. ಅರಣ್ಯ ರಕ್ಷಕರು ಮೋಗ್ರು ಗಸ್ತು, ಬಾಲಕೃಷ್ಣ ಗೌಡ ಅಲೆಕ್ಕಿ ಅಧ್ಯಕ್ಷರು ಜೈ ಶ್ರೀ ರಾಮ್ ಪ್ರೇಂಡ್ಸ್ ಕ್ಲಬ್, ಪುಂಡಲೀಕ ಆಚಾರ್ಯ ಸದಸ್ಯರು ತಾಲೂಕು ಪಂಚಾಯತ್ ಉದಯ ಕುಮಾರ್ ಬಿ.ಕೆ. ಅಧ್ಯಕ್ಷರು ಬಂದಾರು, ಪಂಚಾಯತ್ ಹಾಗೂ ಸಿ.ಎ. ಬ್ಯಾಂಕ್ ಪದ್ಮುಂಜ ಇದರ ನಿರ್ದೇಶಕರು, ಜೈ ಶ್ರೀ ರಾಮ್ ಪ್ರೆಂಡ್ಸ್ ಕ್ಲಬ್ ಎಲ್ಲಾ ಪದಾದಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತಿ ಇದ್ದರು. ನಾಗೇಶ ಮನ್ನಡೆ ಕಾರ್ಯಕ್ರಮ ನಿರ್ವಹಿಸಿದರು.

- Advertisement -
spot_img

Latest News

error: Content is protected !!