- Advertisement -
- Advertisement -
ಮಂಗಳೂರು: ಸದ್ಯ ರಾಜ್ಯ ರಾಜಕೀಯ ಹಾಗೂ ಅಪರಾಧ ರಂಗದಲ್ಲಿ ಭಾರೀ ಸುದ್ದಿಯಲ್ಲಿರುವ ಸ್ಯಾಂಟ್ರೋ ರವಿ ತಲೆಮರೆಸಿಕೊಂಡಿದ್ದು ಕರಾವಳಿ ಜಿಲ್ಲೆಗಳಲ್ಲೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈತ ಕರಾವಳಿಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಟ್ರೋ ರವಿ ಸೀಕ್ರೆಟ್ಗಳೇ ದೊಡ್ಡವರಿಗೆ ಶಾಕ್ ಕೊಡುವಂತಿವೆ.. ಪೊಲೀಸರಂತೂ ಸ್ಯಾಂಟ್ರೋವನ್ನ ಏನಾದ್ರೂ ಮಾಡಿ ಪಂಕ್ಚರ್ ಮಾಡಲೇಬೇಕು ಎಂದು ತಂಡ ಕಟ್ಟಿಕೊಂಡು ಮೂಲೆ ಮೂಲೆಯಲ್ಲೂ ಜಾಲಾಡುತ್ತಿದ್ದಾರೆ.
- Advertisement -