Friday, May 17, 2024
Homeಕರಾವಳಿಶಾಸಕ ರಾಜೇಶ್ ನಾಯ್ಕ್ ರಿಂದ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ;

ಶಾಸಕ ರಾಜೇಶ್ ನಾಯ್ಕ್ ರಿಂದ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ;

spot_img
- Advertisement -
- Advertisement -

ಬಂಟ್ವಾಳ:ಇಲ್ಲಿನ ಅರಳ ಗ್ರಾ.ಪಂ ವ್ಯಾಪ್ತಿಯಲ್ಲಿ ರೂ 2 ಕೋಟಿ 70 ಲಕ್ಷ ಅನುದಾನದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ನೆರವೇರಿಸಿದರು. ಮುಖ್ಯವಾಗಿ ಅಲ್ಮುಡೆ ರಸ್ತೆ 20 ಲಕ್ಷ ,ಗರುಡ ಮಹಾಕಾಳಿ ದೇವಸ್ಥಾನದ ರಥಬೀದಿ 25ಲಕ್ಷ,ಕಲ್ಲೊಟ್ಟೆ ಸೇತುವೆ 25ಲಕ್ಷ,ಹಿಂದೂ ರುದ್ರ ಭೂಮಿ 4 ಲಕ್ಷ ,ಪಾಚಿಲೋಡಿ ರಸ್ತೆ 15 ಲಕ್ಷ,ಅರಳ ಕುಟ್ಟಿಕಳ ರಸ್ತೆ 5 ಲಕ್ಷ ,ಬೊಳ್ಳಾಲು ಗುಡ್ಡೆ ರಸ್ತೆ 10ಲಕ್ಷ,ಇರ್ನಿ ಕುದ್ರು ಕಿಂಡಿ ಅಣೆಕಟ್ಟು 40ಲಕ್ಷ ಕಾಮಗಾರಿಗಳಿಗೆ ಚಾಲನೆ ಮತ್ತು ಪೂರ್ಣಗೊಂಡ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಮೇಲೆ ಬಂಟ್ವಾಳಕ್ಕೆ ಸರಕಾರದ ವಿವಿಧ ಇಲಾಖೆಗಳಿಂದ ಗರಿಷ್ಠ ಅನುದಾನ ಬಂಟ್ವಾಳ ಕ್ಷೇತ್ರಕ್ಕೆ ಸಿಕ್ಕಿದ್ದು ವಿಶೇಷ ಮುತುವರ್ಜಿಯಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ತುಂಗಪ್ಪ ಬಂಗೇರಾ,ಮಾಜಿ ಪಂಚಾಯತ್ ಅಧ್ಯಕ್ಷರಾದ ತುಂಗಮ್ಮ,ಪ್ರಮುಖರಾದ ಜಗದೀಶ ಆಳ್ವ,ರಂಜಿನಿ,ಲಕ್ಷ್ಮಿಧರ ಪೂಜಾರಿ,ಲಕ್ಷ್ಮಿಧರ ಶೆಟ್ಟಿ,ರಂಜನ್,ಡೊಂಬಯ ಅರಳ,ಉಮೇಶ್ ಅರಳ,ಪುರುಷೋತ್ತಮ ಶೆಟ್ಟಿ ವಾಮದಪದವು,ಗಣೇಶ್ ರೈ ಮಾಣಿ,ಪ್ರಸನ್ನ ಶೆಟ್ಟಿ ,ಬಾಬು ಶೇಕ,ಯೋಗೀಶ್ ಅರಳ,ಅಶ್ವಥ್ ಅರಳ,ಶಶಿಧರ ಶೆಟ್ಟಿ,ರಾಜೇಂದ್ರ ಕರ್ಪೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!