- Advertisement -
- Advertisement -
ಸುಭ್ರಮಣ್ಯ: ಇಲ್ಲಿನ ಪುಷ್ಪಗಿರಿ ತಪ್ಪಲಿನ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಮತ್ತು ಶಬ್ದದ ಅನುಭವವಾಗಿದೆ ಎಂದು ಜನ ಮಾಹಿತಿ ನೀಡಿದ್ದಾರೆ. ನಾಗರಿಕರು ಹೇಳುವ ಪ್ರಕಾರ ದ.ಕ ಜಿಲ್ಲೆ ಮತ್ತು ಕೊಡಗಿನ ಗಡಿ ಭಾಗದ ಜನರಿಗೆ ಈ ಅನುಭವವಾಗಿದೆ.
ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಬಾಳುಗೋಡು,ಐನಕಿದು ದೇವಚಳ್ಳ ಗ್ರಾಮದ ಕರಂಗಲ್ಲು ,ದೊಡ್ಡ ಕಜೆ ಪ್ರದೇಶಗಳಲ್ಲಿ ಶಬ್ದದ ಅನುಭವ ಉಂಟಾಗಿದೆ. ರಾತ್ರಿವೇಳೆ ಈ ಘಟನೆ ವರದಿಯಾಗಿದೆ. ಅಲ್ಲದೆ ಈ ಹಿಂದೆ ಈ ಪ್ರದೇಶದಲ್ಲಿ ಜಲಸ್ಫೋಟ ವರದಿಯಾಗಿತ್ತು. ಸಧ್ಯ ಇಲ್ಲಿನ ನಾಗರಿಕರು ಭೂಮಿ ಕಂಪಿಸಿದ ಘಟನೆಯಿಂದ ಕುತೂಹಲ ಮತ್ತು ಮುಂದೇನಾಗಬಹುದೆಂಬ ಆತಂಕ ಹೊಂದಿದ್ದಾರೆ.
- Advertisement -