ಮಂಗಳೂರು; ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಕ್ಕಿ ಹಾಗೂ ಲಾರಿ ಸಮೇತ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನಿವಾಸಿಗಳಾದ ಸಮೀರ್ ಮತ್ತು ಯಾಸಿರ್ ಆರೋಪಿಗಳು. ಆರೋಪಿಗಳು ಸುಮಾರು 50 ಕ್ವಿಂಟಲ್ಕ್ಕಿಂತಲೂ ಅಧಿಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಮುಲ್ಕಿ ಸಮೀಪದ ಬಳ್ಳುಂಜೆ ಕಡೆಯಿಂದ ಮೈಸೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದರು. ಮಂಗಳವಾರ ಮುಂಜಾನೆ ಮುಲ್ಕಿ ಬಸ್ಸು ನಿಲ್ದಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಲಾರಿಯನ್ನು ಅನುಮಾನ ಬಂದು ಗಸ್ತು ತಿರುಗುತ್ತಿದ್ದ ಮುಲ್ಕಿ ಪೊಲೀಸರು ನಿಲ್ಲಿಸಿದಾಗ ಚಾಲಕ ಗೊಬ್ಬರ ಎಂದು ಸುಳ್ಳು ಹೇಳಿದ್ದಾನೆ.
ಈ ಸಂದರ್ಭ ಪೊಲೀಸರು ಪರಿಶೀಲನೆ ನಡೆಸಿದಾಗ ಅಕ್ರಮ ಪಡಿತರ ಅಕ್ಕಿ ಸಾಗಾಟ ಬೆಳಕಿಗೆ ಬಂದಿದ್ದು ಲಾರಿಯಲ್ಲಿದ್ದ ಇಬ್ಬರನ್ನು ಬಂಧಿಸಿದ್ದು ಪ್ರಮುಖ ಆರೊಪಿಯ ಹುಡುಕಾಟದಲ್ಲಿದ್ದಾರೆ.
ಲಾರಿಯಲ್ಲಿ 50 ಕ್ವಿಂಟಾಲ್ ಗೂ ಅಧಿಕ ಪಡಿತರ ಅಕ್ಕಿ ಇದ್ದು ಮಂಗಳೂರು ಕಂದಾಯ ಇಲಾಖೆಯ ಪ್ರಭಾರ ಅಧಿಕಾರಿ ಮಾಣಿಕ್ಯ ಹಾಗೂ ವಶಪಡಿಸಿಕೊಂಡು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.