Tuesday, May 14, 2024
Homeಕರಾವಳಿಕಾರ್ಕಳ: ಒಬ್ಬ ಮಹಿಳೆಯೊಂದಿಗೆ ಇಬ್ಬರಿಗೆ ಅನೈತಿಕ ಸಂಬಂಧ, ಕಂಠ ಪೂರ್ತಿ ಕುಡಿದು ಒಬ್ಬನನ್ನು ಕೊಲೆಗೈದ ಮತ್ತೊಬ್ಬ..!

ಕಾರ್ಕಳ: ಒಬ್ಬ ಮಹಿಳೆಯೊಂದಿಗೆ ಇಬ್ಬರಿಗೆ ಅನೈತಿಕ ಸಂಬಂಧ, ಕಂಠ ಪೂರ್ತಿ ಕುಡಿದು ಒಬ್ಬನನ್ನು ಕೊಲೆಗೈದ ಮತ್ತೊಬ್ಬ..!

spot_img
- Advertisement -
- Advertisement -

ಕಾರ್ಕಳ: ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದ್ದ ಇಬ್ಬರು ಪುರುಷರು ಪರಸ್ಪರ ಜಗಳ ಮಾಡಿಕೊಂಡು ಒಬ್ಬಾತ ಮತ್ತೊಬ್ಬನನ್ನು ಕೊಲೆಗೈದಿರುವ ಘಟನೆ ಕಾರ್ಕಳದ ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಮಿಯ್ಯಾರಿನ ಬೋರ್ಕಟ್ಟೆ ನಿವಾಸಿ ಹರೀಶ್ ಪೂಜಾರಿ (42 ವ) ಕೊಲೆಯಾದ ವ್ಯಕ್ತಿ. ಕೂಲಿ ಕಾರ್ಮಿಕ ಗುರುವ ಮೇರ ಕೊಲೆಗೈದಾತ.

ಮಹಿಳೆ ರೀತಾ ಎಂಬವರಿಗೆ ವಿವಾಹವಾಗಿದ್ದು ಮುಕ್ಕಾಯಿ ಎಂಬಲ್ಲಿ ತಾಯಿಯ ಇನ್ನೊಂದು ಜಾಗದಲ್ಲಿ ಒಬ್ಬರೇ ವಾಸವಾಗಿದ್ದರು. ಮಹಿಳೆಯ ಇಬ್ಬರು ಮಕ್ಕಳು ಅಜ್ಜಿಯ ಇನ್ನೊಂದು ಮನೆಯಲ್ಲಿ ವಾಸವಿದ್ದರು. ಗಂಡ ಬೆಳುವಾಯಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಹಿಳೆಯ ಮನೆಗೆ ಕೂಲಿ ಕಾರ್ಮಿಕ ಗುರುವ ಮತ್ತು ಹರೀಶ್ ಆಗಾಗ್ಗೆ ಬಂದು ಹೋಗುತ್ತಿದ್ದರು. ಮೇ 23ರಂದು ಹರೀಶ್ ಪೂಜಾರಿ ಮಹಿಳೆ ಮನೆಯಲ್ಲೆ ಇದ್ದ. ಸಂಜೆ ಗುರುವ ಕೂಡ ಮನೆಗೆ ಬಂದಿದ್ದಾನೆ. ಇದೇ ವೇಳೆ ಮಹಿಳೆ ಜತೆಗಿನ ಅನೈತಿಕ ಸಂಬಂಧ ಬಗ್ಗೆ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು, ಜಗಳ ಒಂದು ಹಂತದಲ್ಲಿ ಮುಕ್ತಾಯ ಕಂಡು ಇಬ್ಬರು ರಾತ್ರಿ 8 ಗಂಟೆಗೆ ಮಲಗಿದ್ದಾರೆ.

ಆದರೆ ರಾತ್ರಿ ಮಲಗಿದ್ದ ಹರೀಶ್ ಪೂಜಾರಿಯ ತಲೆಗೆ ಆರೋಪಿ ಗುರುವ ಕಬ್ಬಿಣದ ಹಾರೆಯಿಂದ ಹೊಡೆದು ಕೊಲೆ ನಡೆಸಿ ಪರಾರಿಯಾಗಿದ್ದಾನೆ. ಅನೈತಿಕ ಸಂಬಂಧವಿರುವ ದ್ವೇಷದಿಂದಲೇ ಕೊಲೆ ನಡೆದಿದೆ ಎನ್ನಲಾಗಿದೆ.

ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಸ್ಥಳಕ್ಕೆ ಡಿವೈಎಸ್ಪಿ ಭರತ್ ರೆಡ್ಡಿ, ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ಸ್ಥಳಕ್ಕೆ ಭೇಟಿ ತನಿಖೆ ನಡೆಸಿದರು. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!