Thursday, May 9, 2024
Homeಕರಾವಳಿಉಡುಪಿಸಂತೋಷ್ ಮೃತದೇಹ ಇರುವ ಲಾಡ್ಜ್ ಗೆ ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿ ರೇ ಭೇಟಿ

ಸಂತೋಷ್ ಮೃತದೇಹ ಇರುವ ಲಾಡ್ಜ್ ಗೆ ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿ ರೇ ಭೇಟಿ

spot_img
- Advertisement -
- Advertisement -

ಉಡುಪಿ: ಗುತ್ತಿಗೆದಾರ ಸಂತೋಷ್ ಅವರ ಮೃತದೇಹವಿರುವ ಲಾಡ್ಜ್ ಗೆ ಪಶ್ಚಿಮ ವಲಯ ಐಜಿಪಿ ದೇವ ಜ್ಯೋತಿ ರೇ ಭೇಟಿ ನೀಡಿದ್ದಾರೆ.

ಈ ವೇಳೆ ಐಜಿಪಿ ಗೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಸಾಥ್ ನೀಡಿದ್ರು. ಶಾಂಭವಿ ಲಾಡ್ಜ್ ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ಸಂತೋಷ್ ಕುಟುಂಬದವರ ಬರುವಿಕೆಗೆ ಕಾಯುತ್ತಿದ್ದೇವೆ. ಕುಟುಂಬದವರು ಬಂದ ನಂತರ ತನಿಖೆ ಆರಂಭವಾಗಲಿದೆ. ಈ ಪ್ರಕರಣ ಬಹಳ ಸೂಕ್ಷ್ಮವಾಗಿದೆ. ಕುಟುಂಬಸ್ಥರು ಬಂದ ನಂತರ ನಮ್ಮ ವಿಧಿ ವಿಧಾನಗಳನ್ನು ಆರಂಭ ಮಾಡುತ್ತೇವೆ ಎಂದಿದ್ದಾರೆ.

ಅಲ್ಲದೇ ನಾಳೆ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಮರಣೋತ್ತರ ಪರೀಕ್ಷೆಯ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಕುಟುಂಬಸ್ಥರು ಬಂದು ದೂರು ನೀಡಿದ ನಂತರ ತೀರ್ಮಾನಿಸಲಾಗುವುದು ಎಂದ್ರು.

- Advertisement -
spot_img

Latest News

error: Content is protected !!