Monday, June 30, 2025
Homeಕರಾವಳಿಉಡುಪಿವಿಶಾಲ ಗಾಣಿಗ ಕೊಲೆ ಪ್ರಕರಣ ; ದುಬೈನಲ್ಲಿ ಇದ್ದುಕೊಂಡು ಪತ್ನಿ ಕೊಲೆಗೆ ಸುಪಾರಿ ನೀಡಿದ್ದ ಪತಿ!!

ವಿಶಾಲ ಗಾಣಿಗ ಕೊಲೆ ಪ್ರಕರಣ ; ದುಬೈನಲ್ಲಿ ಇದ್ದುಕೊಂಡು ಪತ್ನಿ ಕೊಲೆಗೆ ಸುಪಾರಿ ನೀಡಿದ್ದ ಪತಿ!!

spot_img
- Advertisement -
- Advertisement -

ಉಡುಪಿ : ಕರಾವಳಿ ಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಬ್ರಹ್ಮಾವರದ ಅಪಾರ್ಟ್‌ಮೆಂಟ್‌ ನಲ್ಲಿ ಕೊಲೆಯಾಗಿದ್ದ ಗೃಹಿಣಿ ವಿಶಾಲ ಗಾಣಿಗ ಹಂತಕರ ಹೆಡೆಮುರಿ ಕಟ್ಟುವಲ್ಲಿ ಉಡುಪಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಅಮಾಯಕನಂತೆ ನಟಿಸುತಿದ್ದ ಪತಿಯೇ ಸುಪಾರಿ ನೀಡಿ ಬಾಡಿಗೆ ಹಂತಕರಿಂದ ಕೊಲೆ ಮಾಡಿಸಿರುವುದು ಸಾಬೀತಾಗಿದ್ದು ಆರೋಪಿ ರಾಮಕೃಷ್ಣ ಗಾಣಿಗನನ್ನು ಬಂಧಿಸಿದ್ದಾರೆ.

ರಾಮಕೃಷ್ಣ ಆಕ್ರಮ ಸಂಬಂಧ ಹೊಂದಿದ್ದು, ಇದು ಪತ್ನಿಗೆ ತಿಳಿದಿತ್ತು. ಅಲ್ಲದೇ ಆಸ್ತಿ ವ್ಯವಹಾರ ಹಿನ್ನೆಲೆಯಲ್ಲಿ ಪತ್ನಿ ಹತ್ಯೆಗೆ ಪತಿ ರಾಮಕೃಷ್ಣ ಸಂಚು ರೂಪಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ವಿಶಾಲಾ ಅವರ ಶವ ಜುಲೈ 12 ರಂದು ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದ್ದು, ವಿಶಾಲಾ ತಮ್ಮ ಪತಿ ರಾಮಕೃಷ್ಣ ಗಾಣಿಗ ಅವರೊಂದಿಗೆ ದುಬೈನಲ್ಲಿ ತಮ್ಮ 7 ವರ್ಷದ ಮಗಳು ಅರ್ವಿ ಜೊತೆ ಇದ್ದರು. ಪೂರ್ವಜರ ಆಸ್ತಿಯ ವಿಭಜನೆಗೆ ಸಂಬಂಧಿಸಿದಂತೆ ವಿಶಾಲಾ ಮತ್ತು ಅರ್ವಿ ಜುಲೈ 2 ರಂದು ಬ್ರಹ್ಮಾವರಕ್ಕೆ ಆಗಮಿಸಿದ್ದರು.

ಜುಲೈ 12 ರಂದು ಬೆಳಿಗ್ಗೆ, ತನ್ನ ತಂದೆಯಾದ ವಾಸು ಗಾಣಿಗಾಗೆ ವಿಶಾಲಾ ಕರೆ ಮಾಡಿ, ಬ್ಯಾಂಕ್‌ಗೆ ಭೇಟಿ ನೀಡಿದ ನಂತರ ಗುಜ್ಜಾದಿಯಲ್ಲಿರುವ ತನ್ನ ಮನೆಗೆ ಬರುತ್ತೇನೆ ಎಂದು ಹೇಳಿದ್ದರು. ವಿಶಾಲಾ ಬಹಳ ಹೊತ್ತಿನ ಬಳಿಕವೂ ಬರದೇ ಇದ್ದಾಗ, ವಾಸು ಗಾಣಿಗಾ ಅವರ ಅಪಾರ್ಟ್ಮೆಂಟ್ಗೆ ಹೋದಾಗ, ಅಲ್ಲಿ ಅವರು ಮಗಳ ದೇಹವನ್ನು ಕಂಡಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 449 (ಮನೆ ಅತಿಕ್ರಮಣ) ಮತ್ತು 392 (ದರೋಡೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೊಲೆಯಾದ ದಿನ ವಿಶಾಲಾ ಮನೆಯಲ್ಲಿ ಎರಡು ಕಪ್ ಚಹಾ ಪತ್ತೆಯಾಗಿತ್ತು, ಇದು ಕೊಲೆಯಲ್ಲಿ ತಿಳಿದಿರುವ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯನ್ನು ಖಚಿತ ಪಡಿಸಿತ್ತು. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.

ವಿಶಾಲಾ ಮತ್ತು ಪತಿ ರಾಮಕೃಷ್ಣರ ಮೊಬೈಲ್ ಫೋನ್‌ಗಳ ಕರೆಗಳನ್ನು ಪರಿಶೀಲಿಸಿದ ನಂತರ, ರಾಮಕೃಷ್ಣ ಅವರು ಕೆಲವು ಅಪರಿಚಿತ ಸಂಖ್ಯೆಗಳಿಗೆ ಮಾಡಿದ ಕರೆಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದರಿಂದ ಮಾರ್ಚ್‌ನಲ್ಲಿ ಬ್ರಹ್ಮಾವರದ ವಿಶಾಲಾ ಮನೆಗೆ ಉತ್ತರ ಪ್ರದೇಶದ ಇಬ್ಬರು ಸುಪಾರಿ ಕೊಲೆಗಾರರು ಭೇಟಿ ನೀಡಿದ್ದರು. ರಾಮಕೃಷ್ಣ ಅವರು ಇವರನ್ನು ತಮ್ಮ ಸ್ನೇಹಿತರೆಂದು ಪರಿಚಯಿಸಿದ್ದರು. ಈ ವ್ಯಕ್ತಿಗಳು ಕೊಲೆಯಾದ ದಿನ ವಿಶಾಲಾ ಅವರ ಮನೆಯಲ್ಲಿದ್ದರು.

ರಾಮಕೃಷ್ಣ ಗಾಣಿಗನನ್ನು ಈಗಾಗಲೇ ಬಂಧಿಸಿ ಜುಲೈ 23ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದು ಇನ್ನೋರ್ವ ಆರೋಪಿ ಉತ್ತರ ಪ್ರದೇಶದ ಸ್ವಾಮಿನಾಥ ನಿಶಾದ (38) ಎಂಬಾತನನ್ನು ಗೋರಖ್ಪುರದಲ್ಲಿ ಬಂಧಿಸಿ ಉಡುಪಿಗೆ ಕರೆತರಲಾಗಿದೆ. ಇದರೊಂದಿಗೆ ಇನ್ನೋರ್ವ ಆರೋಪಿಯ ಬಗ್ಗೆ ಮಾಹಿತಿ ಲಭಿಸಿದ್ದು ಆದಷ್ಟೂ ಬೇಗ ಬಂಧಿಸಲಾಗುವುದು. ಪ್ರಕರಣಕ್ಕೆ ಮೃತಳ ಗಂಡ ರಾಮಕೃಷ್ಣ ಆರು ತಿಂಗಳಿಂದ ದುಬೈನಲ್ಲಿ ಇದ್ದುಕೊಂಡೇ ಕೊಲೆಗೆ ಸಂಚು ನಡೆಸಿ ಸುಪಾರಿ ಹಂತಕರಿಗೆ ಸುಮಾರು 2 ಲಕ್ಷ ಹಣ ನೀಡಿದ್ದ ಮಾಹಿತಿ ತನಿಖೆಯಿಂದ ಹೊರ ಬಿದ್ದಿದೆ.

- Advertisement -
spot_img

Latest News

error: Content is protected !!