Saturday, June 28, 2025
Homeಕರಾವಳಿಕಬಕದಲ್ಲಿ ವೀರ ಸಾವರ್ಕರ್ ಗೆ ಅವಮಾನ ಹಿನ್ನಲೆ: ಆ.17ರಂದು ಪುತ್ತೂರಿನಲ್ಲಿ ಜನ ಜಾಗೃತಿ ರಥ...

ಕಬಕದಲ್ಲಿ ವೀರ ಸಾವರ್ಕರ್ ಗೆ ಅವಮಾನ ಹಿನ್ನಲೆ: ಆ.17ರಂದು ಪುತ್ತೂರಿನಲ್ಲಿ ಜನ ಜಾಗೃತಿ ರಥ ಯಾತ್ರೆ!

spot_img
- Advertisement -
- Advertisement -

ಪುತ್ತೂರು: ಭಾರತದ ಸ್ವಾತಂತ್ರ್ಯ ಸೇನಾನಿ ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ಕಬಕದಲ್ಲಿ ಅವಮಾನ ಮಾಡಲಾದ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನಲ್ಲೂ ದೇಶ ಪ್ರೇಮ ಬೆಳಸುವ ಸಲುವಾಗಿ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಆ.17ರಂದು ಪುತ್ತೂರಿನಲ್ಲಿ ಜನ ಜಾಗೃತಿ ರಥ ಯಾತ್ರೆ ನಡೆಯಲಿದೆ ಎಂದು ಹಿಂದು ಜಾಗರಣ ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ ಘೋಷಣೆ ಮಾಡಿದ್ದಾರೆ.

ಆ.15ರಂದು ಕಬಕದಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಜಾಗೃತಿ ಯಾತ್ರೆ ಬಗ್ಗೆ ಘೋಷಣೆ ಮಾಡಲಾಗಿದೆ. ಪ್ರತಿಯೊಬ್ಬ ರಾಷ್ಟ್ರೀಯವಾದಿಗಳ ಹೃದಯ ಮತ್ತು ಮನಸ್ಸಿನಲ್ಲಿ ವೀರ ಸಾವರ್ಕರ್ ಸ್ಥಾನ ಪಡೆದಿದ್ದು, ಅವರಿಗೆ ಕಬಕದಲ್ಲಿ ಅವಮಾನ ಆಗಿದೆ. ಈ ನಿಟ್ಟಿನಲ್ಲಿ ಆ.17ರಂದು ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಬಕದ ತನಕ ವೀರ ಸಾವರ್ಕರ್ ರಥಯಾತ್ರೆ ನಡೆಸುವ ಕುರಿತು ಸಂಕಲ್ಪ ಕೈಗೊಳ್ಳಲಾಯಿತು.

ಹಿಂದು ಜಾಗರಣ ವೇದಿಕೆ ವಿಭಾಗ ಮಾತೃ ಸುರಕ್ಷಾ ಪ್ರಮುಖ್ ಗಣರಾಜ್ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜತ್ ಹೊಸಮನೆ, ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ನಗರ ಅಧ್ಯಕ್ಷ ಪುಷ್ಪರಾಜ್, ಅವಿನಾಶ್, ದಿನೇಶ್ ಪಂಜಿಗ, ಗ್ರಾ.ಪಂ. ಸದಸ್ಯರಾದ ಪುರುಷೋತ್ತಮ ಕೋಲ್ಪೆ, ಪವಿತ್ರ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!