Thursday, April 25, 2024
Homeಕರಾವಳಿಕಾಸರಗೋಡುಕೇರಳದಲ್ಲೊಂದು ಭಯಾನಕ ಘಟನೆ : ಕುಡಿದ ಮತ್ತಿನಲ್ಲಿ ಮರ್ಮಾಂಗವನ್ನೇ ಕಚ್ಚಿ ತುಂಡು ಮಾಡಿದ ಯುವಕ

ಕೇರಳದಲ್ಲೊಂದು ಭಯಾನಕ ಘಟನೆ : ಕುಡಿದ ಮತ್ತಿನಲ್ಲಿ ಮರ್ಮಾಂಗವನ್ನೇ ಕಚ್ಚಿ ತುಂಡು ಮಾಡಿದ ಯುವಕ

spot_img
- Advertisement -
- Advertisement -

ಕೇರಳ:  ಕುಡಿದ ಮತ್ತಿನಲ್ಲಿ  ಕೊಲೆ ಮಾಡುವುದು, ಮಾರಣಾಂತಿಕ ಹಲ್ಲೆ ಮಾಡೋದನ್ನು ನೋಡಿದ್ದೇವೆ.ಆ ದ್ರೆ ಇಲ್ಲೊಬ್ಬ  ವ್ಯಕ್ತಿ ಇನ್ನೊಬ್ಬನ ಮರ್ಮಾಂಗವನ್ನೇ ಹಲ್ಲಿನಿಂದ ಕಚ್ಚಿ ಕಟ್​ ಮಾಡಿದ್ದಾನೆ.

ಅಂದ್ಹಾಗೆ ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಕೇರಳದ ಕುನ್ನಾಥುರನ ಬಾರ್​ನಲ್ಲಿ. ಕುಡಿದ ಅಮಲಿನಲ್ಲಿ ಗಲಾಟೆ ವೇಳೆ ಮರ್ಮಾಂಗವನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿದ್ದಾನೆ. 28 ವರ್ಷದ ಷರೀಫ್​ ಎಂಬಾತ, 55 ವರ್ಷದ ಸುಲೇಮಾನ್ ಮರ್ಮಾಂಗವನ್ನು ಕಚ್ಚಿ ತುಂಡು ಮಾಡಿದ್ದಾನೆ.


ಷರೀಫ್ ಪೆರುಂಬಾದಪ್ಪು ನಿವಾಸಿಯಾಗಿದ್ದು, ಸುಲೇಮಾನ್ ಪುನ್ನುಕಾವುನಲ್ಲಿ ವಾಸವಾಗಿದ್ದರು. ಇಬ್ಬರೂ ಬಾರ್​ಗೆ ಬೇರೆ ಬೇರೆ ವಾಹನಗಳಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಷರೀಫ್ ಆಟೋ ರಸ್ತೆಯಲ್ಲಿ ಸುಲೇಮಾನ್​ನ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಸಂಬಂಧ ಗಲಾಟೆ ನಡೆದಿತ್ತು. ಆ ಸಮಯದಲ್ಲಿ ನೆತ್ತಿಗೇರಿದ್ದ ಸಿಟ್ಟು ಬಾರ್​ಗೆ ಹೋಗಿ ಇಬ್ಬರೂ ಕಂಠಪೂರ್ತಿ ಕುಡಿದ ಮೇಲೆ ಈ ರೀತಿ ಕೃತ್ಯದಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಬ್ಬರ ಜಗಳ ಬಿಡಿಸಲು ಹೋದ ಬಾರ್ ಸಿಬ್ಬಂದಿಯ ಮೇಲೆಯೂ ಷರೀಫ್ ಹಲ್ಲೆ ನಡೆಸಿದ್ದಾನೆ. ಕೊನೆಗೆ ಬಾರ್ ಸಿಬ್ಬಂದಿ ಗ್ರಾಹಕರ ನೆರವಿನಿಂದ ಷರೀಫ್​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ, ಸುಲೇಮಾನ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಸುಲೇಮಾನ್​ನನ್ನು ತ್ರಿಶೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ತುಂಡಾದ ಮರ್ಮಾಂಗವನ್ನ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -
spot_img

Latest News

error: Content is protected !!