ಪುತ್ತೂರು: ಹಿಜಾಬ್ ಮತ್ತು ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳೂ ವಿರೋಧ ಮಾಡುತ್ತಿರುವ ಈ ಸಂದರ್ಭದಲ್ಲಿ ಇಲ್ಲಿನ ಹಿಂದೂಗಳು ಉಪ್ಪಿನಂಗಡಿಯಲ್ಲಿ ನಗರದ ಹೆಸರಾಂತ ಬಟ್ಟೆ ವ್ಯಾಪಾರಿ ಹಸನಬ್ಬ ಅವರ ಅಂತ್ಯಕ್ರಿಯೆಗೆ ಅವಕಾಶ ಕಲ್ಪಿಸುವ ಮೂಲಕ ತಮ್ಮ ಓಕುಳಿ ಮೆರವಣಿಗೆಗೆ ವಿರಾಮ ನೀಡಿ ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಹಸನಬ್ಬ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಉಪ್ಪಿನಂಗಡಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಾರ್ಯಕ್ರಮದ ಪೂರ್ವಭಾವಿಯಾಗಿ ಓಕುಳಿ ಮೆರವಣಿಗೆಯು ಪ್ರಗತಿಯಲ್ಲಿತ್ತು, ಮೆರವಣಿಗೆಯು ಬ್ಯಾಂಡ್ ಮತ್ತು ಕಹಳೆಗಳೊಂದಿಗೆ ನಡೆಯಿತು. ಹಾಗೇ ಪುತ್ತೂರಿನ ಖ್ಯಾತ ಬಟ್ಟೆ ವ್ಯಾಪಾರಿ ಹಾಜಿ ಹಸನಬ್ಬ ನಿಧನರಾಗಿದ್ದರು.
ಅವರ ಅಂತ್ಯಕ್ರಿಯೆಯು ಹಿಂದೂ ಮೆರವಣಿಗೆಯ ಅದೇ ರಸ್ತೆಯ ಮೂಲಕ ಹಾದುಹೋಗುತ್ತಿತ್ತು. ಹಾಜಿ ಹಸನಬ್ಬ ಅವರ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಮೆರವಣಿಗೆಯಲ್ಲಿದ್ದ ಜನರು ಆಗಮಿಸುತ್ತಿದ್ದಂತೆ, ತಕ್ಷಣವೇ ಬ್ಯಾಂಡ್ ಮತ್ತು ಸಂಗೀತವನ್ನು ನಿಲ್ಲಿಸಿ, ಮೃತ ವ್ಯಾಪಾರಿಗೆ ಗೌರವ ಸಲ್ಲಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಹಿಂದೂ-ಮುಸಲ್ಮಾನರ ನಡುವೆ ಚಾಲ್ತಿಯಲ್ಲಿರುವ ಹಲವಾರು ಸಂಘರ್ಷದ ನಡುವೆಯೂ ಅನೇಕ ಮಾನವೀಯ ಆಚಾರ-ವಿಚಾರಗಳು ಹಾಗೇ ಉಳಿದುಕೊಂಡಿವೆ ಮತ್ತು ಪರಸ್ಪರ ಪ್ರೀತಿ ಇನ್ನೂ ಜೀವಂತವಾಗಿದೆ.
ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತಿರುವಾಗ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಭಕ್ತರ ಈ ಉದಾತ್ತ ವರ್ತನೆಗೆ ಹಲವಾರು ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.