Thursday, May 9, 2024
Homeಕರಾವಳಿನಾವು ಲಂಚ ಸ್ವೀಕರಿಸಿಲ್ಲ ಎಂದು ಮಂತ್ರಿಮಂಡಲದ ಸಚಿವರು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಮಂಗಳೂರಿನಲ್ಲಿ ಹಿಂದೂ...

ನಾವು ಲಂಚ ಸ್ವೀಕರಿಸಿಲ್ಲ ಎಂದು ಮಂತ್ರಿಮಂಡಲದ ಸಚಿವರು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ: ಮಂಗಳೂರಿನಲ್ಲಿ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸವಾಲು

spot_img
- Advertisement -
- Advertisement -

ಮಂಗಳೂರು: ಈಶ್ವರಪ್ಪ ಸಹಿತ ಈಗಿನ ಮಂತ್ರಿಮಂಡಲದ ಸಚಿವರು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಮಂಗಳೂರಿನಲ್ಲಿ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸವಾಲು ಹಾಕಿದ್ದಾರೆ. ಮಂತ್ರಿಮಂಡಲದ ಸಚಿವರು ನಾವು ಲಂಚ ತೆಗೆದುಕೊಂಡಿಲ್ಲ ಎಂದು ಆಣೆ ಮಾಡಲಿ. ನಿಮಗೆ ಪ್ರಮಾಣ ಮಾಡಲು ಆಗುತ್ತಾ..? ಆ ತಾಕತ್ತು ಇದ್ಯಾ? ಎಂದು ಮಂಗಳೂರಿನಲ್ಲಿ ಹಿಂದೂ ಮಹಾಸಭಾ ಪ್ರಶ್ನಿಸಿದೆ.

ಈ ಬಗ್ಗೆ ಮಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅಖಿಲ ಭಾರತ ಹಿಂದೂ ಮಹಾಸಭಾ ಮಾಜಿ ಸಚಿವ ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ. ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ‌ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಈಶ್ವರಪ್ಪ ನಾನು ಕಮಿಷನ್ ಕೇಳಿಲ್ಲ ಎಂದು ಹೇಳ್ತಿದ್ದಾರೆ. ನಾನು ಅವರಿಗೆ ಸವಾಲ್ ಹಾಕ್ತಿದ್ದೀನಿ. ಈಶ್ವರಪ್ಪ ಸಹಿತ ಈಗಿನ ಮಂತ್ರಿಮಂಡಲದ ಸಚಿವರು ಧರ್ಮಸ್ಥಳಕ್ಕೆ ಬಂದು ,ನಾವು ಲಂಚ ತೆಗೆದಿಲ್ಲ ಎಂದು ಆಣೆ ಮಾಡಲಿ ಎಂದಿದ್ದಾರೆ.

ನಿಮಗೆ ಪ್ರಮಾಣ ಮಾಡಲು ಆಗುತ್ತಾ..? ಆ ತಾಕತ್ತ್ ಇದ್ಯಾ. ಧರ್ಮಸ್ಥಳದ ದೇವರನ್ನು ಒಪ್ಪುವುದಾದ್ರೆ ಅಲ್ಲಿಗೆ ಬರಲು ರೆಡಿ ಇದ್ದೀರಾ? ನಾವು ಕೂಡಾ ಬರ್ತೀವಿ‌. ಇಡೀ ಮಾಧ್ಯಮದವರನ್ನು ಕರೆಯೋಣ.ಆಗ ನಾವು ನಿಮ್ಮನ್ನು ಒಳ್ಳೆಯವರು ಎಂದು ಕರೆಯಬಹುದು ಎಂದು ಸವಾಲು ಹಾಕಿದ್ದಾರೆ. ಆದ್ರೆ ಪ್ರಮಾಣ ಮಾಡಿಯೂ ನೀವು ತಪ್ಪಿತಸ್ಥರು ಎಂದು ಸಾಬೀತಾದಲ್ಲಿ ನೀವು ಎರಡೆರಡು ಧರ್ಮದ್ರೋಹಿಗಳು ಆಗ್ತೀರಾ ಎಂದಿದ್ದಾರೆ.

- Advertisement -
spot_img

Latest News

error: Content is protected !!