- Advertisement -
- Advertisement -
ಬೆಳ್ತಂಗಡಿ : ಯುದ್ಧ ಭೂಮಿ ಉಕ್ರೇನ್ ನ ಖಾರ್ಕಿವ್ ನಲ್ಲಿ ಸಿಲುಕಿದ್ದ ವೈದ್ಯ ವಿದ್ಯಾರ್ಥಿನಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ನ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ಹೀನಾ ಫಾತಿಮಾ ನಿನ್ನೆ ರಾತ್ರಿ ಪೋಲೆಂಡ್ ನಿಂದ ವಿಮಾನದ ಮೂಲಕ ಇಂದು ಬೆಳಗ್ಗೆ 7 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.
ಇನ್ನೂ ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಳಿದ್ದು ಅಲ್ಲಿಂದ ನಂತರ ತನ್ನ ಉಜಿರೆಯ ಮನೆ ಸೇರಲಿದ್ದಾರೆ ಎಂದು ಹೀನಾ ಫಾತೀಮಾ ತಾಯಿ ಶಹನಾ ಮಹಾ ಎಕ್ಸ್ಪ್ರೆಸ್ ಗೆ ತಿಳಿಸಿದ್ದಾರೆ.
- Advertisement -