Saturday, April 27, 2024
Homeತಾಜಾ ಸುದ್ದಿಶ್ರೀನಗರದಲ್ಲಿ ಭಾರಿ ಹಿಮಪಾತ- ಕರ್ತವ್ಯ ನಿರತ ಯೋಧ ಹುತಾತ್ಮ

ಶ್ರೀನಗರದಲ್ಲಿ ಭಾರಿ ಹಿಮಪಾತ- ಕರ್ತವ್ಯ ನಿರತ ಯೋಧ ಹುತಾತ್ಮ

spot_img
- Advertisement -
- Advertisement -

ಶ್ರೀನಗರ:ಇಲ್ಲಿನ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್‌ಧಾರ್ ಸೆಕ್ಟರ್‌ನಲ್ಲಿ ಭಾರಿ ಹಿಮಪಾತವಾಗಿದೆ. ಈ ವೇಳೆ ಸೇನಾ ಪೋಸ್ಟ್ ಮೇಲೆ ಹಿಮಪಾತವಾಗಿದ್ದು, ಓರ್ವ ಸೈನಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. 7 ಆರ್‌ಆರ್‌ನ ಸೇನಾ ಘಟಕಡಾ ಮೇಲೆ ಇಂದು ಬೆಳಗ್ಗೆ ತಂಗ್​ಧಾರ್​ ಸೆಕ್ಟರ್‌ನ ನಿಯಂತ್ರಣ ಪ್ರದೇಶದ ನಿಯಂತ್ರಣದ ಹಾದಿಯಲ್ಲಿ ಹಿಮಪಾತ ಉಂಟಾದಾಗ ಈ ಘಟನೇ ಸಂಭವಿಸಿದೆ.

ಮೃತ ಸೈನಿಕನನ್ನು ನಿಖಿಲ್ ಶರ್ಮಾ ಎಂದು ಗುರುತಿಸಲಾಗಿದೆ. ಹಿಮಪಾತದಿಂದಾಗಿ ಮೂವರು ಸೈನಿಕರು ಹಿಮದಡಿಯಲ್ಲಿ ಸಿಲುಕಿಕೊಂಡಿದ್ದು, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ ದುರದೃಷ್ಟವಶಾತ್ ಒಬ್ಬ ಸೈನಿಕ ಈ ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!