- Advertisement -
- Advertisement -
ಬೆಂಗಳೂರು: ಸೆಪ್ಟೆಂಬರ್ 30 ರಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಿಗೆ ತಲಾ ಒಂದೊಂದು ದಿನದ ಉಸ್ತುವಾರಿ ನೀಡಲಾಗಿದೆ. 21 ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಿಗೆ ಯಾತ್ರೆಯ ಒಂದೊಂದು ದಿನದ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಕೆ. ಹರೀಶ್ ಕುಮಾರ್ ಅವರಿಗೆ ಎರಡನೇ ದಿನದ ಜವಾಬ್ದಾರಿ ಮತ್ತು ಮಂಜುನಾಥ್ ಭಂಡಾರಿ ಅವರಿಗೆ ಮೂರನೇ ದಿನದ ಜವಾಬ್ದಾರಿ ನೀಡಲಾಗಿದೆ.
21 ವಿಧಾನ ಪರಿಷತ್ ಸದಸ್ಯರಿಗೆ 21 ದಿನಗಳ ಉಸ್ತುವಾರಿಯಲ್ಲಿ ಜನರನ್ನು ಸೇರಿಸುವಿಕೆ, ವಾಹನ ವ್ಯವಸ್ಥೆ, ಜಾಹೀರಾತು ಮತ್ತು ರಿಫ್ರೆಶ್ ಮೆಂಟ್ ವ್ಯವಸ್ಥೆ ಸೇರಿದಂತೆ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಹೊರಿಸಲಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಿರ್ದೇಶನದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಿಗೆ ಜವಾಬ್ದಾರಿ ನೀಡಿದ್ದಾರೆ.
- Advertisement -