Saturday, May 18, 2024
Homeಕರಾವಳಿಉಡುಪಿರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ದ.ಕ, ಉಡುಪಿ ಜಿಲ್ಲಾ ಪ್ರವಾಸ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ದ.ಕ, ಉಡುಪಿ ಜಿಲ್ಲಾ ಪ್ರವಾಸ

spot_img
- Advertisement -
- Advertisement -

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಮತ್ತು ನಾಳೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸವನ್ನು ಕೈಗೊಂಡಿದ್ದಾರೆ.

ಪ್ರಯಾಣದ ಪ್ರಕಾರ, ಗೆಹ್ಲೋಟ್ ಅವರು ಇಂದು ಬೆಂಗಳೂರಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅಲ್ಲಿಂದ ಸರ್ಕ್ಯೂಟ್ ಹೌಸ್‌ಗೆ ತೆರಳಿ ನಂತರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಬಂದು ಮಧ್ಯಾಹ್ನ 12.25ಕ್ಕೆ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿ ವಿಶ್ರಾಂತಿ ಪಡೆಯುವರು.

ರಾಜ್ಯಪಾಲರು ಮಧ್ಯಾಹ್ನ 2.45ಕ್ಕೆ ಸರ್ಕ್ಯೂಟ್ ಹೌಸ್‌ನಿಂದ ಹೊರಟು 3.45ಕ್ಕೆ ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಆಗಮಿಸುವರು. ಅಲ್ಲಿಂದ ಸಂಜೆ 4 ಗಂಟೆಗೆ ಹೊರಟು 4.10ಕ್ಕೆ ಕೋಡಿಯಡ್ಕದ ಅನ್ನಪೂರ್ಣೇಶ್ವರಿ ದೇವಸ್ಥಾನ ತಲುಪಲಿದ್ದಾರೆ. ಅಲ್ಲಿಂದ ಸಂಜೆ 4.25ಕ್ಕೆ ಹೊರಟು 4.55ಕ್ಕೆ ಕಾರ್ಕಳ ಅತಿಥಿಗೃಹಕ್ಕೆ ಆಗಮಿಸಿ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ 7.10ಕ್ಕೆ ಕಾರ್ಕಳದಿಂದ ಹೊರಟು 8.10ಕ್ಕೆ ಮಂಗಳೂರಿನ ಸರ್ಕ್ಯೂಟ್ ಹೌಸ್ ತಲುಪಿ ರಾತ್ರಿ ತಂಗುವರು.

ಮಾರ್ಚ್ 15 ರಂದು, ರಾಜ್ಯಪಾಲರು ಸರ್ಕ್ಯೂಟ್ ಹೌಸ್‌ನಿಂದ ಬೆಳಿಗ್ಗೆ 8.15 ಕ್ಕೆ ಹೊರಟು 8.45 ಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿ ಬೆಂಗಳೂರಿಗೆ ತಲುಪಲಿದ್ದಾರೆ.

- Advertisement -
spot_img

Latest News

error: Content is protected !!