- Advertisement -
- Advertisement -
ಬೆಂಗಳೂರು: ಡಿಸಿಸಿ ಬ್ಯಾಂಕ್ ಗಳನ್ನು ಅಪೆಕ್ಸ್ ಬ್ಯಾಂಕ್ ನೊಡನೆ ವಿಲೀನ ಮಾಡುವ ವಿಚಾರವಾಗಿ ಈಗಾಗಲೇ ಒಂದು ಸುತ್ತಿನ ಸಭೆ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸೋಮಶೇಖರ್, ಈಗಾಗಲೇ ಜಾರ್ಖಂಡ್ ಮತ್ತು ಕೇರಳದಲ್ಲಿ ಈ ಮಾದರಿ ಚಾಲನೆಯಲ್ಲಿ ಇದೆ, ಈ ರೀತಿಯ ವಿಲೀನ ಪ್ರಕ್ರಿಯೆಯಿಂದ ರೈತರಿಗೆ ಬಡ್ಡಿಯಲ್ಲಿ ಉಳಿತಾಯ ಆಗುತ್ತದೆ, ಕರ್ನಾಟಕದಲ್ಲಿ ಕೂಡಾ ಇದೇ ರೀತಿ ವಿಲೀನ ಮಾಡುವ ಚಿಂತನೆ ಇದೆ ಎಂದು ಹೇಳಿದ್ದಾರೆ.
ಅಲ್ಲದೇ ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಅಧಿಕಾರಿಗಳು ಕೇರಳ ಮತ್ತು ಜಾರ್ಖಂಡ್ ಗೆ ಅಧ್ಯಯನ ಪ್ರವಾಸ ಹೋಗಿ ಅಲ್ಲಿನ ಸಾಧಕ ಬಾಧಕಗಳನ್ನು ನೋಡಿ ವರದಿ ಕೊಡಲಿದ್ದಾರೆ,
ನಂತರ ವಿಲೀನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
- Advertisement -