Saturday, June 28, 2025
Homeಮನರಂಜನೆಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ವೀಕ್ಷಕರಿಗೊಂದು ಸಿಹಿ ಸುದ್ದಿ....

ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ವೀಕ್ಷಕರಿಗೊಂದು ಸಿಹಿ ಸುದ್ದಿ….

spot_img
- Advertisement -
- Advertisement -

ಬೆಂಗಳೂರು :  ಝೀ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ “ಜೊತೆ ಜೊತೆಯಲಿ ಸೀರಿಯಲ್ ನಾಳೆಗೆ 200ನೇ ಕಂತುಗಳನ್ನು ಪೂರೈಸುತ್ತಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಮೈಲಿಗಲ್ಲು  ಸೃಷ್ಟಿಸಿದ ಈ ಜನಪ್ರಿಯ ಧಾರಾವಾಹಿ 200 ಕಂತುಗಳನ್ನು ತಲುಪಿ ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಅನಿರುದ್ಧ ಜತ್ಕರ್ ಹಾಗೂ ಮೇಘಾ ಶೆಟ್ಟಿ ಜೋಡಿ ಈಗ ಕೋಟ್ಯಂತರ ಮಂದಿಯ ದಿಲ್ ಕದ್ದಿದೆ. ವಯಸ್ಸು, ಅಂತಸ್ತು, ಜೀವನಶೈಲಿ ಎಲ್ಲದರಲ್ಲೂ ಆಕಾಶ ಭೂಮಿಯಷ್ಟು ಅಂತರವಿದ್ದರೂ ಅವರಿಬ್ಬರ ನಡುವೆ ಚಿಗುರುವ ಪ್ರೇಮಕಥೆ ಎಲ್ಲರಿಗೂ ಇಷ್ಟವಾಗಿದೆ.

ಆರೂರು ಜಗದೀಶ್ ನಿರ್ದೇಶನದ ಈ ಧಾರಾವಾಹಿ ಮೂಲಕ ನಟಿ ವಿಜಯಲಕ್ಷ್ಮಿ ಸಿಂಗ್, ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸಿದ್ದಾರೆ. ಅಲ್ಲದೇ ಈ ಧಾರಾವಾಹಿ ಮೂಲಕ ವೀಕ್ಷಕರಿಗೆ ಮತ್ತಷ್ಟೂ ಹತ್ತಿರವಾಗಿದೆ. ಅಲ್ಲದೇ ಧಾರಾವಾಹಿಯಲ್ಲಿ ಅಭಿನಯಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. “ಆರೂರು ಜಗದೀಶ್ ನನ್ನನ್ನು ಈ ಧಾರಾವಾಹಿಯಲ್ಲಿ ನಟಿಸಲು ಕೇಳಿದಾಗ ನನಗೆ, ಧಾರಾವಾಹಿಗಳಲ್ಲಿ ದೀರ್ಘ ಕಾಲ ನಟಿಸಬೇಕಿದ್ದರಿಂದ ಅಷ್ಟೇನೂ ಆಸಕ್ತಿ ಇರಲಿಲ್ಲ. ಆದರೆ ಜೊತೆ ಜೊತೆಯಲಿ ಧಾರಾವಾಹಿಯ ಕೆಲ ಕಂತುಗಳನ್ನು ವೀಕ್ಷಿಸಿದ ನಂತರ ಈ ಧಾರಾವಾಹಿಯಲ್ಲಿ ನಟಿಸಲು ನಾನು ಒಪ್ಪಿಕೊಂಡೆ. ಈ ಧಾರಾವಾಹಿಯು ಚಲನಚಿತ್ರಗಳ ಗುಣಮಟ್ಟದಲ್ಲಿದೆ ಹಾಗೂ ಶ್ರೀಮಂತ ಕುಟುಂಬದ ಹಿನ್ನೆಲೆಯ ನನ್ನ ಶಾರದಾದೇವಿ ಪಾತ್ರಕ್ಕೆ ಅಪಾರ ಗೌರವವಿದೆ. ಆರ್ಯವರ್ಧನ್ ತಾಯಿಯಾಗಿ ನನ್ನ ಪಾತ್ರ ಚೆನ್ನಾಗಿರುವುದರಿಂದ ಈ ಪಾತ್ರ ಒಪ್ಪಿಕೊಂಡೆ”ಎಂದಿದ್ದಾರೆ.

ಜೊತೆ ಜೊತೆಯಲಿ ದ್ವಿಶತಕ ತಲುಪಿದ ಕುರಿತು ಝೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. “ಕನ್ನಡ ಕಿರುತೆರೆ ವಾಹಿನಿಗಳಲ್ಲಿಯೇ ಜೊತೆ ಜೊತೆಯಲಿ ಧಾರಾವಾಹಿ ಹೊಸ ದಾಖಲೆ ಬರೆದಿದೆ. ಇದೀಗ 200 ಕಂತುಗಳನ್ನು ತಲುಪಿರುವುದು ಅದರ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿಯಾಗಿದೆ. ಜೀ಼ ಕನ್ನಡ ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಅದಕ್ಕೆ ವೀಕ್ಷಕರೂ ಸದಾ ಸ್ಪಂದಿಸುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಯಶಸ್ಸು ನಮಗೆ ಮತ್ತಷ್ಟು ಅಂತಹುದೇ ಕಾರ್ಯಕ್ರಮಗಳನ್ನು ರೂಪಿಸಲು ಸ್ಫೂರ್ತಿ ತಂದಿದೆ”ಎಂದಿದ್ದಾರೆ.

- Advertisement -
spot_img

Latest News

error: Content is protected !!