- Advertisement -
- Advertisement -
ಉಡುಪಿ; ಬಾರ್ ನಲ್ಲಿ ಜೊತೆಯಾಗಿ ಕುಡಿದು ಬಳಿಕ ಹೊರಗೆ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ತನ್ನ ಜೊತೆಗಿದ್ದ ಸ್ನೇಹಿತರಿಬ್ಬರ ತಾಯಂದಿರನ್ನು ನಿಂದಿಸಿದ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿದ ಘಟನೆ ಉಡುಪಿಯ ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169 A ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ನಡೆದಿದೆ.
ಕುಟ್ಟಿ ಮತ್ತು ನವೀನ್ ಎಂಬುವವರು ಬಾರ್ ನಿಂದ ಕುಡಿದು ಬರುತ್ತಿದ್ದಾಗ ಕುಮಾರ್ ಎಂಬಾತ ಕುಡಿದ ಮತ್ತಿನಲ್ಲಿ ನವೀನ್ ಹಾಗೂ ಕುಟ್ಟಿಯ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.ಇದೇ ಮಾತಿಗೆ ಮಾತು ಬೆಳೆದು ಕುಟ್ಟಿ ಹಾಗೂ ನವೀನ್ ಕಮಾರ್ ತಲೆಗೆ ಮರದ ತುಂಡಿನಿಂದ ಹೊಡಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- Advertisement -