- Advertisement -
- Advertisement -
ಕಾಸರಗೋಡು: ಉದ್ಯೋಗ ಕೊಡಿಸೋದಾಗಿ ಹೇಳಿ ಶಿಕ್ಷಕಿಗೆ 15 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಕಿದೂರು ಪದಕ್ಕಲ್ ಹೌಸ್ ನ ನಿಶ್ಮಿತಾ ಶೆಟ್ಟಿ ವಂಚನೆಗೊಳಗಾದ ಶಿಕ್ಷಕಿ. ಶೇಣಿ ಬಲ್ತಕಲ್ಲಿನ ಸಚಿತಾ ರೈ ವಂಚಿಸಿದ ಮಹಿಳೆ.
ಸಚಿತಾ ರೈ ವಿರುದ್ಧ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಸಿಆರ್ ಐ ನಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆ ನೀಡಿ 2023 ರ ಮೇ 31 ರಿಂದ 2023 ರ ಆಗಸ್ಟ್ 25 ರ ನಡುವೆ ಹಲವು ಕಂತುಗಳಾಗಿ 15,05,796 ರೂ . ಪಡೆದು ವಂಚನೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಹಲವು ಬಾರಿ ವಿಚಾರಿಸಿದರೂ ಉದ್ಯೋಗ ಲಭಿಸಲಿಲ್ಲ. ನೀಡಿದ ಹಣ ಕೇಳಿದರೂ ನೀಡಲು ಮುಂದಾಗದಿರುವುದರಿಂದ ನಿಶ್ಮಿತಾ ಶೆಟ್ಟಿ ದೂರು ನೀಡಿದ್ದಾರೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ
- Advertisement -