- Advertisement -
- Advertisement -
ಬೆಳ್ತಂಗಡಿ: ತಾಲೂಕು ಪಂಚಾಯತ್ ಬಿಜೆಪಿ ಬೆಂಬಲಿತ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಲಾಯಿಲ(47) ಇಂದು ಲಾಯಿಲ ಗ್ರಾಮದ ಆದರ್ಶನಗರದ ಸರ್ಕಾರಿ ಬಾವಿಯ ಕಟ್ಟೆಗೆ ರಿಕ್ಷಾವನ್ನು ಡಿಕ್ಕಿ ಹೊಡೆದು ನಂತರ ಅಲ್ಲಿಂದಲ್ಲೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
![](https://mahaxpress.com/wp-content/uploads/2021/08/Laila-1-1015x1024.jpeg)
ರಿಕ್ಷಾ ಚಾಲಕರಾಗಿ ದುಡಿಯುತಿದ್ದ ಇವರು ಕಳೆದ ಒಂದು ವರುಷ ಹಿಂದೆ ಬೆಳ್ತಂಗಡಿ ನಗರದ ಸಮೀಪ ನಡೆದ ಅಪಘಾತದಲ್ಲಿ ಬೆನ್ನು ಮೂಳೆ ಮುರಿತಕ್ಕೊಳಗಾಗಿ ಮಾನಸಿಕವಾಗಿ ನೊಂದಿದ್ದರು. ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಂದು ಆದರ್ಶ ನಗರದ ಗೆಳೆಯನಿಗೆ ಆರೋಗ್ಯ ಸರಿಇಲ್ಲದ ಕಾರಣ ನೋಡಲು ಹಣ್ಣುಹಂಪಲು ತಂದು ವಿಚಾರಿಸಿ ವಾಪಸ್ ಹೋಗುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
![](https://mahaxpress.com/wp-content/uploads/2021/08/Laila-2-1024x576.jpeg)
![](https://mahaxpress.com/wp-content/uploads/2021/08/Laila-3-1024x576.jpeg)
![](https://mahaxpress.com/wp-content/uploads/2021/08/Laila-4-1024x485.jpeg)
ಬೆಳ್ತಂಗಡಿ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗಳು ಮತ್ತು ಸ್ಥಳೀಯರು ಸೇರಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
- Advertisement -