- Advertisement -
- Advertisement -
ಉಡುಪಿ: ಕಡಲ್ಕೊರೆತದಿಂದಾಗಿ ಪಡುಬಿದ್ರಿಯ ನಡಿಪಟ್ಣ ಪ್ರದೇಶದಲ್ಲಿ ಮೀನುಗಾರಿಕಾ ಶೆಡ್ ಒಂದು ಅಪಾಯಕ್ಕೆ ಸಿಲುಕಿದೆ.
ಕಾಪು ತಾಲೂಕಿನಲ್ಲಿರುವ ಮಹೇಶ್ವರಿ ಡಿಸ್ಕೋ ಫಂಡ್ ನ ಮೀನುಗಾರಿಕಾ ಶೆಡ್ ಅಪಾಯಕ್ಕೆ ಸಿಲುಕಿದ್ದು, ಶೇಖರಿಸಿಟ್ಟಿದ್ದ 25 ಸಾವಿರ ಲೀಟರ್ ನಷ್ಟು ಸೀಮೆಎಣ್ಣೆಯನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ.
ಅಲ್ಲದೇ ಐವತ್ತು ಲಕ್ಷ ರೂಪಾಯಿಯಷ್ಟು ಮೌಲ್ಯದ ಮೀನುಗಾರಿಕಾ ಪರಿಕರಗಳನ್ನು ಕೂಡಾ ಬೇರೆಡೆಗೆ ಸ್ಥಳಾಂತರಿಸಲಾಗಿದೆ.60 ಕ್ಕೂ ಅಧಿಕ ಮೀನುಗಾರಿಕಾ ಕುಟುಂಬಗಳು ಈ ಶೆಡ್ ಅನ್ನು ಜೀವನೋಪಾಯಕ್ಕಾಗಿ ಅವಲಂಬಿಸಿದ್ದು, ಕಡಲ್ಕೊರೆತ ತಡೆಗೆ ಹಾಕಲ್ಪಟ್ಟಿದ್ದ ಕಲ್ಲುಗಳು ಸಮುದ್ರ ಪಾಲಾಗಿವೆ.ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -