- Advertisement -
- Advertisement -
ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿ ಹೋಗಿದೆ.
ಅರಬ್ಬಿ ಸಮುದ್ರದಲ್ಲಿ ಮುಳುಗಿ ಹೋಗಿದ್ದು, ಮೀನುಗಾರಿಕೆಗೆ ತೆರಳಿದ್ದ ಬೋಟ್ ನಲ್ಲಿ ಹತ್ತು ಜನರು ಇದ್ದರು.
ಮುಳುಗಿದ ಕೂಡಲೇ ಹತ್ತು ಜನ ಮೀನುಗಾರರು ಈಜಿ ಮತ್ತೊಂದು ಬೋಟ್ ಹತ್ತಿ ಪಾರಾಗಿದ್ದಾರೆ.
ಮಂಗಳೂರು ಬಂದರಿನಿಂದ ಹೊರಟಿದ್ದ ಜೈ ಶ್ರೀರಾಮ್ ಹೆಸರಿನ ಬೋಟ್, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದ ಕಾರಣ ಮುಳುಗಿ ಹೋಗಿದೆ.
ಮಂಗಳೂರಿನಿಂದ 30 ನಾಟಿಕಲ್ ಮೈಲು ದೂರದಲ್ಲಿ ಬೋಟ್ ಅವಘಡ ಸಂಭವಿಸಿದೆ.
- Advertisement -