Sunday, June 29, 2025
Homeತಾಜಾ ಸುದ್ದಿಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಗಲ್ಲಿಗೇರುತ್ತಿದ್ದಾಳೆ ಈ ಮಹಿಳೆ: ಅಷ್ಟಕ್ಕೂ ಈಕೆ ಮಾಡಿದ ತಪ್ಪಾದರೂ ಏನು...

ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಗಲ್ಲಿಗೇರುತ್ತಿದ್ದಾಳೆ ಈ ಮಹಿಳೆ: ಅಷ್ಟಕ್ಕೂ ಈಕೆ ಮಾಡಿದ ತಪ್ಪಾದರೂ ಏನು ಗೊತ್ತಾ?

spot_img
- Advertisement -
- Advertisement -

ಮಥುರಾ: ಭಾರತದ ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಮಥುರಾ ಜೈಲಿನಲ್ಲಿ ಮಹಿಳಾ ಕೈದಿಯೊಬ್ಬಳನ್ನ ಗಲ್ಲಿಗೇರಿಸಲು ತಯಾರಿ ನಡೆದಿದೆ. ಶಬ್​ನಮ್ ಮತ್ತು ಸಲೀಂ ಎಂಬ ಕೈದಿಗಳನ್ನ ಗಲ್ಲಿಗೇರಿಸುವಂತೆ ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಎತ್ತಿಹಿಡಿದಿತ್ತು. ನಂತರ ಈ ಇಬ್ಬರೂ ರಾಷ್ಟ್ರಪತಿಗಳಿಗೆ ಕ್ಷಮಾದಾನ ನೀಡುವಂತೆ ಪತ್ರ ಬರೆದಿದ್ದರು. ರಾಷ್ಟ್ರಪತಿಗಳು ಇವರ ಕ್ಷಮಾದಾನ ಮನವಿಯನ್ನ ತಿರಸ್ಕರಿಸಿದ್ದರು. ಸದ್ಯ ಶಬ್​ನಮ್ ಬರೇಲಿ ಜೈಲಿನಲ್ಲಿದ್ದು, ಸಲೀಂ ಆಗ್ರಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಮಥುರಾ ಜೈಲಿನಲ್ಲಿ 150 ವರ್ಷಗಳ ಹಿಂದೆಯೇ ಮಹಿಳೆಯರನ್ನ ಗಲ್ಲಿಗೇರಿಸುವ ಕೋಣೆಯನ್ನು ನಿರ್ಮಿಸಲಾಗಿದೆ. ಆದರೆ ಸ್ವಾತಂತ್ರ್ಯಾನಂತರ ಈವರೆಗೆ ಯಾವುದೇ ಮಹಿಳೆಯನ್ನ ಗಲ್ಲಿಗೇರಿಸಿಲ್ಲ. ಮಥುರಾ ಜೈಲಿನ ಹಿರಿಯ ಜೈಲ್ ಸೂಪರಿಂಟೆಂಡೆಂಟ್ ಪ್ರಕಾರ ಈ ಇಬ್ಬರನ್ನ ಗಲ್ಲಿಗೇರಿಸುವ ದಿನಾಂಕ ನಿಗದಿಯಾಗಿಲ್ಲ. ಆದರೆ ಈಗಾಗಲೇ ಜೈಲು ಆಡಳಿತದಿಂದ ಗಲ್ಲಿಗೇರಿಸುವ ಹಗ್ಗಕ್ಕಾಗಿ ಆರ್ಡರ್ ಮಾಡಲಾಗಿದೆ. ಈ ಇಬ್ಬರೂ ಕೈದಿಗಳಿಗೆ ಡೆತ್ ವಾರೆಂಟ್ ನೀಡುತ್ತಿದ್ದಂತೆಯೇ ಗಲ್ಲಿಗೇರಿಸಲಾಗುತ್ತದೆ.

ಏನಿದು ಪ್ರಕರಣ..?
2008ರ ಏಪ್ರಿಲ್ 14 ಮತ್ತು 15 ರಂದು ಉತ್ತರಪ್ರದೇಶದ ಅಮ್ರೊಹ ಜಿಲ್ಲೆಯ ಹಸನ್​ಪುರ್​ ನಗರದ ಬಳಿಯ ಬವನ್​ಖೆಡಿ ಎಂಬ ಸಣ್ಣ ಗ್ರಾಮದಲ್ಲಿ ಒಂದೇ ಕುಟುಂಬದ 7 ಮಂದಿಯ ಹತ್ಯೆ ನಡೆದಿತ್ತು. ಶಬ್ನಂ​ ಮತ್ತು ಆಕೆಯ ಪ್ರಿಯಕರ ಸಲೀಂ ಸೇರಿ ಶಬ್ನಂ​ಳ ತಂದೆ ಶೌಕತ್, ತಾಯಿ ಹಷ್ಮಿ, ಸಹೋದರರಾದ ಅನೀಸ್, ರಶೀದ್, ಅತ್ತಿಗೆ ಅಂಜುಮ್ ಮತ್ತು ಆಕೆಯ ಸಹೋದರಿ ರಬಿಯಾಳನ್ನ ಕೊಡಲಿಯಿಂದ ಕೊಂದುಹಾಕಿದ್ದರು. ಅಲ್ಲದೇ ಶಬ್​ನಮ್ ತನ್ನ ಸಂಬಂಧಿ ಅರ್ಷ್​ ಎಂಬವನನ್ನು ಉಸಿರುಗಟ್ಟಿಸಿ ಕೊಂದಿದ್ದಳು. ಇವರೆಲ್ಲರೂ ತನ್ನ ಮತ್ತು ಸಲೀಂ ನಡುವಿನ ಪ್ರೀತಿಗೆ ಅಡ್ಡ ಬರುತ್ತಿದ್ದಾರೆಂಬ ಕಾರಣಕ್ಕೆ ಶಬ್ನಂ ಮತ್ತು ಸಲೀಂ ಈ ಸಾಮೂಹಿಕ ಹತ್ಯೆ ನಡೆಸಿದ್ದರು.

ಈ ಪ್ರಕರಣದ ವಿಚಾರಣೆ ಅಮ್ರೋಹ ಕೋರ್ಟ್​ನಲ್ಲಿ 2 ವರ್ಷ 3 ತಿಂಗಳ ಕಾಲ ನಡೆದಿತ್ತು. 2010ರ ಜುಲೈ 15 ರಂದು ಜಿಲ್ಲಾ ಜಡ್ಜ್ ಎಸ್​ಎಎ ಹುಸೈನಿ ಶಬ್ನಂ ಮತ್ತು ಸಲೀಂನನ್ನು ಗಲ್ಲಿಗೇರಿಸುವ ಆದೇಶ ಹೊರಡಿಸಿದ್ದರು.

ಶಬ್ನಂ ಮತ್ತು ಸಲೀಂರ ಈ ಪ್ರಕರಣದಲ್ಲಿ ಒಟ್ಟು 100 ಬಾರಿ cross examination ಮಾಡಲಾಗಿತ್ತು. ತೀರ್ಪು ನೀಡುವ ದಿನದಂದು ಜಡ್ಜ್​ ಒಟ್ಟು 29 ಸಾಕ್ಷಿದಾರರ ಹೇಳಿಕೆಗಳನ್ನ ಕೇಳಿ 2010ರ ಜುಲೈ 14 ರಂದು ಶಬ್​ನಮ್ ಮತ್ತು ಸಲೀಂ ಅಪರಾಧಿಗಳೆಂದು ಘೋಷಿಸಿತ್ತು. ಅದರ ಮಾರನೆ ದಿನ ಜಡ್ಜ್ ಎಸ್​ಎಎ ಹುಸೈನಿ ಈ ಇಬ್ಬರನ್ನೂ ಗಲ್ಲಿಗೇರಿಸುವಂತೆ ಆದೇಶ ಹೊರಡಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 29 ಜನರಿಗೆ 649 ಪ್ರಶ್ನೆಗಳನ್ನ ಕೇಳಲಾಗಿತ್ತು. 160 ಪುಟಗಳ ಆದೇಶವನ್ನ ಹೊರಡಿಸಲಾಗಿತ್ತು.

- Advertisement -
spot_img

Latest News

error: Content is protected !!