- Advertisement -
- Advertisement -
ಕೇರಳ; ಭೀಕರ ರಸ್ತೆ ಅಪಘಾತದಲ್ಲಿ ತಂದೆ ಮಗ ಸಾವನ್ನಪ್ಪಿರುವ ಘಟನೆ ಕೇರದ ಪನಮರಮ್ ಬಳಿಯ ಕಪ್ಪುಮಚಲ್ ನಲ್ಲಿ ಬುಧವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಪೆರುಮ್ತಟ್ಟದ ಮುಂಡೋಡನ್ ನಿವಾಸಿ ಝುಬೈರ್ ಸಖಾಫಿ (42) ಮತ್ತು ಪುತ್ರ ಮಿದ್ಲಾಗ್ (12) ಸಾವನ್ನಪ್ಪಿದ್ದಾರೆ.
ಸಂಜೆ 5.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸುಬೈರ್ ಮತ್ತು ಅವರ ಮಗ ಸ್ಕೂಟರ್ನಲ್ಲಿ ಆರಾಮ್ ಮೈಲ್ ಬಳಿಯ ಮಾನಂಚಿರಾದಲ್ಲಿರುವ ತಮ್ಮ ಬಾಡಿಗೆ ಮನೆಗೆ ಹಿಂದಿರುಗುತ್ತಿದ್ದಾಗ.ಕಪ್ಪುಮಚಾಲ್ನ ಹಳೆಯ ಗ್ರಾಮ ಕಚೇರಿ ಬಳಿ ಎದುರಿನಿಂದ ಬಂದ ಕೆಎಸ್ಆರ್ಟಿಸಿ ಬಸ್ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
- Advertisement -