- Advertisement -
- Advertisement -
ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿ ಬೆಂಗಳೂರು ಉಡುಪಿ ಮಾರ್ಗದಲ್ಲಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಿದ್ದು, ಬೆಂಗಳೂರಿನಿಂದ ಉಡುಪಿಗೆ 2 ರಾಜಹಂಸ ಹಾಗೂ 5 ಸಾರಿಗೆ ಬಸ್ಗಳು ಹಾಗೂ ಕುಂದಾಪುರಕ್ಕೆ 3 ರಾಜಹಂಸ, 2 ಅಶ್ವಮೇಧ ಹಾಗೂ 4 ಸಾರಿಗೆ ಬಸ್ಗಳು ಸಂಚರಿಸಲಿವೆ.
ಅಗತ್ಯ ಬಿದ್ದಲ್ಲಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಕೆಎಸ್ಆರ್ಟಿಸಿ ಉಡುಪಿ ವಿಭಾಗದ ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ. ಇನ್ನು ಇದೇ ಬಸ್ಗಳು ಕುಂದಾಪುರ ಹಾಗೂ ಉಡುಪಿಯಿಂದ ಬೆಂಗಳೂರಿಗೆ ಸಂಚರಿಸಲಿವೆ ಎನ್ನಲಾಗಿದೆ.
- Advertisement -