- Advertisement -
- Advertisement -
ತುಮಕೂರು: ಸೇತುವೆ ಕುಸಿದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿರುವ ಘಟನೆ ನಿನ್ನೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ತೀತಾ-ಗೊರವನಹಳ್ಳಿ ಸೇತುವೆ
ಮಳೆಗೆ ನಿನ್ನೆ ಮುಂಜಾನೆ ಅರ್ಧ ಕುಸಿದಿತ್ತು.
ಸೇತುವೆ ಕುಸಿದಿದ್ದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಸ್ಥಳಕ್ಕೆ ಸ್ಥಳೀಯ ಶಾಸಕರೂ ಆಗಿರುವ ಡಾ.ಜಿ. ಪರಮೇಶ್ವರ್ ಭೇಟಿ ನೀಡಿದ್ದು, ಸೇತುವೆ ಮೇಲೆ ನಿಂತು ಕುಸಿತ ವೀಕ್ಷಿಸಿದ್ದರು.
ಪರಮೇಶ್ವರ್ ಭೇಟಿ ನೀಡಿ ಮುಂದೆ ಹೋದ 5 ನಿಮಿಷಕ್ಕೇ ಸೇತುವೆಯ ಇನ್ನೊಂದು ಭಾಗ ಕುಸಿತಗೊಂಡಿದೆ.
ಪರಮೇಶ್ವರ್ ನಿಂತು ವೀಕ್ಷಿಸಿದ್ದ ಸ್ಥಳವೂ ಕುಸಿತವಾಗಿದ್ದು ಸ್ವಲ್ಪದರಲ್ಲೇ ಅಪಾಯದಿಂದ ಡಾ.ಜಿ. ಪರಮೇಶ್ವರ್ ಬಚಾವಾಗಿದ್ದಾರೆ.
- Advertisement -