- Advertisement -
- Advertisement -
ಗುಂಡ್ಯ: ಗಂಡು ಆನೆ ಮರಿಯೊಂದರ ಮೃತದೇಹ ಮಂಗಳೂರು ರಾ.ಹೆ.75ರ ಮಧ್ಯೆ ಶಿರಾಡಿ ಗಡಿ ದೇವಸ್ಥಾನದ ಹಿಂಭಾಗದ 200 ಮೀಟರ್ ದೂರದ ಹೊಳೆ ಪಕ್ಕದಲ್ಲಿ ಪತ್ತೆಯಾಗಿದೆ.
ಸಕಲೇಶಪುರ ವಲಯ, ಮಾರನಹಳ್ಳಿ ಶಾಖೆ, ಕೆಂಪುಹೊಳೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 5 ತಿಂಗಳ ಗಂಡು ಆನೆ ಮರಿಯ ಶವ ಪತ್ತೆಯಾಗಿದ್ದು, ತಾಯಿ ಆನೆಯೊಂದಿಗೆ ಮರಿಯಾನೆ ಆಹಾರ ಹುಡುಕುತ್ತಾ ಬರುವಾಗ ಮೇಲಿನಿಂದ ಜಾರಿ ಬಿದ್ದಿರಬಹುದು ಅಥವಾ ಹಳ್ಳ ದಾಟುವಾಗ ನೀರಿನೊಂದಿಗೆ ಕೊಚ್ಚಿಕೊಂಡು ಬಿದ್ದಿರಬಹುದೆಂದು ಶಂಕಿಸಲಾಗಿದೆ.
- Advertisement -