- Advertisement -
- Advertisement -
ಉಡುಪಿ: ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 8 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಣೆ ಮಾಡಿದೆ.ಕಲ್ಮಾಡಿಯ ಪ್ಯಾರು ಎಸ್. ಎಂಬವರ ಒಡೆತನಕ್ಕೆ ಸೇರಿದ ಈ ಅಜ್ಮೇರ್ ಎನ್ನುವ ಬೋಟ್ ಕುಂದಾಪುರ ಸಮೀಪ ಅರಬ್ಬಿ ಸಮುದ್ರದಲ್ಲಿ
ಬೋಟಿನ ತಳಭಾಗ ಒಡೆದು ನೀರು ಒಳ ನುಗ್ಗಿದ್ದ ಕಾರಣ ಅಪಾಯಕ್ಕೆ ಸಿಲುಕಿತ್ತು.
ಮೀನುಗಾರಿಕಾ ಬೋಟ್ ನಲ್ಲಿದ್ದ ಎಂಟು ಮಂದಿ ಮೀನುಗಾರರು ಕೂಡಾ ಅಪಾಯಕ್ಕೆ ಸಿಲುಕಲ್ಪಟ್ಟಿದ್ದು, ಕರಾವಳಿ ಭದ್ರತಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಕರಾವಳಿ ಕಾವಲು ಪಡೆಗೆ ಮಾಹಿತಿ ರವಾನಿಸಿ ಸಮುದ್ರದಲ್ಲಿ ಗಸ್ತಿನಲ್ಲಿದ್ದ ಎರಡು ನೌಕೆಗಳ ಸಹಾಯದಿಂದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಸಬ್ಮರ್ಸಿಬಲ್ ಪಂಪ್ಗಳನ್ನು ಬಳಸಿಕೊಂಡು ಮೀನುಗಾರಿಕಾ ಬೋಟಿನೊಳಗೆ ತುಂಬುತಿದ್ದ ನೀರನ್ನು ಖಾಲಿ ಮಾಡಿ ಬಳಿಕ ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಬೋಟ್ ಅನ್ನು ಸುರಕ್ಷಿತವಾಗಿ ತೆಗೆದುಕೊಂಡು ಬರಲಾಗಿದೆ.
- Advertisement -