- Advertisement -
- Advertisement -
ಬೆಂಗಳೂರು; ಡಿಸಿಎಂ ಡಿ ಕೆ ಶಿವಕುಮಾರ್ ಅವರ ಶೂವನ್ನೇ ಕದ್ದ ಕಳ್ಳನೊಬ್ಬ ಕದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದಾಶಿವನಗರದ ಭಾಷ್ಯಂ ಸರ್ಕಲ್ ನಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಪೂಜೆಗೆ ಆಗಮಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಪೂಜೆಗೆ ಅಂತಾ ಶೂ ಬಿಚ್ಚಿದ್ದಾರೆ. ಶೂ ಬಿಚ್ಚಿ ಪೂಜೆ ಮಾಡಿ, ಬಳಿಕ ಶೂ ಹಾಕಿಕೊಳ್ಳಲು ಹೋದಾಗ ಕಳ್ಳತನವಾಗಿದೆ.
ಸದಾಶಿವನಗರದ ಭಾಷ್ಯಂ ಸರ್ಕಲ್ ನಲಿ ಈ ಘಟನೆ ನಡೆದಿದ್ದು, ಎಷ್ಟೇ ಹುಡುಕಿದ್ರೂ ಶೂ ಸಿಗದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಬೇರೆ ಶೂ ಹಾಕಿಕೊಂಡು ಪ್ರಯಾಣ ಬೆಳೆಸಿದ್ದಾರೆ.
- Advertisement -