Saturday, June 28, 2025
Homeಆರಾಧನಾವಿಟ್ಲ ಶ್ರೀಪಂಚಲಿಂಗೇಶ್ವರ ಜಾತ್ರೆಯಲ್ಲಿ ಉತ್ಸವ ಮೂರ್ತಿಗೆ ಬಡಿದ ಡ್ರೋಣ್; ಡ್ರೋಣ್‌ ಅನ್ನು ಒದ್ದು ಎಸೆದ ಸಹ ಅರ್ಚಕ

ವಿಟ್ಲ ಶ್ರೀಪಂಚಲಿಂಗೇಶ್ವರ ಜಾತ್ರೆಯಲ್ಲಿ ಉತ್ಸವ ಮೂರ್ತಿಗೆ ಬಡಿದ ಡ್ರೋಣ್; ಡ್ರೋಣ್‌ ಅನ್ನು ಒದ್ದು ಎಸೆದ ಸಹ ಅರ್ಚಕ

spot_img
- Advertisement -
- Advertisement -

ಮಂಗಳೂರು: ವಿಟ್ಲದ ಶ್ರೀಪಂಚಲಿಂಗೇಶ್ವರ ದೇವಸ್ಥಾನ ರಥೋತ್ಸವದ ವೇಳೆ ಡ್ರೋಣ್ ನಿಯಂತ್ರಣ ತಪ್ಪಿ ರಥದಲ್ಲಿ ಏರುವ ಹೊತ್ತಿಗೆ ದೇವರ ಉತ್ಸವ ಮೂರ್ತಿಗೆ ಬಡಿದಿದೆ.

ದೇವರ ಉತ್ಸವ ಮೂರ್ತಿಗೆ ಬಡಿದ ನಂತರ ಅದೇ ಡ್ರೋಣ್ ರಥದ ಮೇಲಿದ್ದ ಸಹಾಯಕ ಅರ್ಚಕರ ತಲೆಗೆ ಬಡಿದು ಬಿದ್ದಿದೆ ಎನ್ನಲಾಗಿದೆ.

ಈ ಘಟನೆಯಿಂದ ಒಮ್ಮೆಗೆ ದೇವರ ಮೂರ್ತಿ ಹೊತ್ತ ಅರ್ಚಕರು ತಬ್ಬಿಬ್ಬಾಗಿದ್ದು, ಅವರು ಸ್ವಲ್ಪ ನಿಯಂತ್ರಣ ತಪ್ಪಿದ್ದರೂ ದೇವರ ಉತ್ಸವ ಮೂರ್ತಿ ಸಹಿತ ಅವರೂ ಕೆಳಕ್ಕೆ ಬೀಳುತ್ತಿದ್ದರು ಎಂದು ಸ್ಥಳೀಯರು ದೂರಿದ್ದಾರೆ.

ಅದೃಷ್ಟವಶಾತ್ ಉತ್ಸವದಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಈ ಅವಘಡದಿಂದ ಕೋಪಗೊಂಡ ಸಹ ಅರ್ಚಕರು ಡ್ರೋಣ್‌ನ್ನು ಒದ್ದು ಎಸೆದಿದ್ದಾರೆ. ಡ್ರೋಣ್ ಅಪರೇಟರ್ ಹುಚ್ಚಾಟಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

- Advertisement -
spot_img

Latest News

error: Content is protected !!