- Advertisement -
- Advertisement -
ಮಂಗಳೂರು: ಸಾಕು ನಾಯಿಗೆ ವಿಷ ಹಾಕಿ ಕೊಂದ ಆರೋಪದಡಿ ಪೊಲೀಸರಿಗೆ ದೂರು ನೀಡಿರುವ ಘಟನೆ ಕಾಪಿಕಾಡಿನಲ್ಲಿ ನಡೆದಿದೆ.
ಕಾಪಿಕಾಡ್ 4ನೇ ಕ್ರಾಸ್ನ ನಿವಾಸಿಯೋರ್ವರು ನಾಲ್ಕೂವರೆ ವರ್ಷದ ಡಾಬರ್ಮನ್ ನಾಯಿ ಸಾಕುತ್ತಿದ್ದರು.ಜು. 24ರ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯ ಅವಧಿಯಲ್ಲಿ ನೆರೆಮನೆಯ ಭೀಮಯ್ಯ ಎಂಬಾತ ಹಳೇ ದ್ವೇಷದ ಹಿನ್ನೆಲೆಯಲ್ಲಿ ನಾಯಿಗೆ ಯಾವುದೋ ವಿಷ ಪದಾರ್ಥ ಹಾಕಿದ್ದು, ಅದರ ಪರಿಣಾಮ ಜು.
25ರಂದು ಅಪರಾಹ್ನ 3 ಗಂಟೆಗೆ ನಾಯಿ ರಕ್ತವಾಂತಿ ಮಾಡಿ ಮೃತಪಟ್ಟಿದೆ ಎಂದು ಉರ್ವ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
- Advertisement -