Saturday, June 28, 2025
Homeತಾಜಾ ಸುದ್ದಿರಾಜ್ಯಕ್ಕೇ ಖುಷಿ ಸುದ್ದಿ ಕೊಟ್ಟು ತಾನೇ ಕೆಟ್ಟ ಸುದ್ದಿಯಾದ ದಿವ್ಯಾ ವಸಂತ; ಪತ್ರಕರ್ತೆಯ ಮುಖವಾಡ ಹಾಕಿದಾಕೆಯ...

ರಾಜ್ಯಕ್ಕೇ ಖುಷಿ ಸುದ್ದಿ ಕೊಟ್ಟು ತಾನೇ ಕೆಟ್ಟ ಸುದ್ದಿಯಾದ ದಿವ್ಯಾ ವಸಂತ; ಪತ್ರಕರ್ತೆಯ ಮುಖವಾಡ ಹಾಕಿದಾಕೆಯ ಕರಾಳ ಮುಖ ಬಯಲು

spot_img
- Advertisement -
- Advertisement -

ಬೆಂಗಳೂರು; ಇದು ರಾಜ್ಯವೇ ಖುಷಿ ಪಡುವ ಸುದ್ದಿ ಅಂತಾ ಹೇಳ್ಕೊಂಡು  ತಾನೊಬ್ಬ ನಿರೂಪಕಿ ಅನ್ನೋ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿ, ಪತ್ರಕರ್ತರ ಮಾನವನ್ನು ಹರಾಜಿಗಿಟ್ಟು, ನೆಗೆಟಿವ್ ಟ್ರೋಲ್ ಗಳನ್ನೇ ತನ್ನ ಮಹಾನ್ ಸಾಧನೆ ಅನ್ನೋ ರೀತಿ ಮೆರೆಯುತ್ತಿದ್ದ ರೀಲ್ಸ್ ರಾಣಿ ದಿವ್ಯಾ ವಸಂತಾಳ ಅಸಲಿ ಮುಖ ಇದೀಗ ಬಯಲಾಗಿದೆ. ಕಡು ಬಡತನದಿಂದ ಬಂದ ದಿವ್ಯ ವಸಂತ ಅತ್ಯಂತ ಕಡಿಮೆ ಅವಧಿಯಲ್ಲಿ ಐಷಾರಾಮಿ ಜೀವನ ನಡೆಸೋದಕ್ಕೆ ಹೇಗೆ ಸಾಧ್ಯವಾಯಿತು ಅನ್ನೋ ಹಲವರ ಅನುಮಾನಗಳಿಗೆ , ಪ್ರಶ್ನೆಗಳಿಗೆ ತಾನು ಮಾಡುತ್ತಿದ್ದ ನೀಚ ಕೆಲಸಗಳ ಮೂಲಕವೇ ಆಕೆ ಉತ್ತರ ಕೊಟ್ಟಿದ್ದಾಳೆ.

ಹೌದು.. ಬೆಂಗಳೂರಿನ ಇಂದಿರಾನಗರ  ಸ್ಪಾ ವೊಂದರ ವ್ಯವಸ್ಥಾಪಕನಿಗೆ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿವ್ಯ ಆಪ್ತ ರಾಜ್ ನ್ಯೂಸ್’ ಸುದ್ದಿವಾಹಿನಿ ಸಿಇಒ ರಾಜಾನುಕುಂಟೆ ವೆಂಕಟೇಶ್, ದಿವ್ಯ ಸಹೋದರ ಸಂದೇಶ್, ಇನ್ನೊರ್ವ ಆರೋಪಿಯನ್ನು ಜಿ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದಾಗ ಹಲವು ಸ್ಫೋಟಕ ವಿಚಾರಗಳು ಬಯಲಾಗಿವೆ. ಇನ್ನು ಮೂವರು ಅರೆಸ್ಟ್ ಆಗುತ್ತಿದ್ದಂತೆ ದಿವ್ಯ ವಸಂತಾ ಎಸ್ಕೇಪ್ ಆಗಿದ್ದಾಳೆ. ಅಲ್ಲದೇ ಇನ್ನಿಬ್ಬರು ಆರೋಪಿಗಳಾದ ಸಚಿನ್, ಆಕಾಶ್ ಕೂಡ ನಾಪತ್ತೆಯಾಗಿದ್ದಾರೆ.

ಇತ್ತೀಚೆಗೆ ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರಿ ಸ್ಟ್ರಾ ಅಂಡ್ ಬ್ಯೂಟಿ’ ಪಾರ್ಲ‌ರ್ ನ ವ್ಯವಸ್ಥಾಪಕ ಶಿವಶಂಕ‌ರ್ ಅವರಿಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ ಹಣ ಸುಲಿಗೆ ಮಾಡಲು ವೆಂಕಟೇಶ್ ತಂಡ ಯತ್ನಿಸಿತ್ತು. ಈ ಬಗ್ಗೆ ಶಿವಶಂಕರ್ ದೂರು ನೀಡಿದ್ದರು.  ತನಿಖೆಗಿಳಿದ ಪೊಲೀಸರಿಗೆ ದಿವ್ಯಕ್ಕ ಆಂಡ್ ಗ್ಯಾಂಗ್ ನ ಕರಾಮತ್ತು ಗೊತ್ತಾಗಿದೆ.

ಸುಲಿಗೆಗೆ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದ ದಿವ್ಯ

ಇನ್ನು ಸುಲಿಗೆ ಕೃತ್ಯಗಳಿಗೆ ವಾಟ್ಸಾಆಪ್‌ನಲ್ಲಿ ‘ಸೈ ರಿಸರ್ಚ್ ಟೀಂ’  ಅನ್ನೋ ಹೆಸರಿನ ಗ್ರೂಪ್ ಅನ್ನು ವೆಂಕಟೇಶ್‌ ಹಾಗೂ ದಿವ್ಯಾ ಮಾಡಿಕೊಂಡಿದ್ದರು. ಈ ಗ್ರೂಪ್‌ನಲ್ಲಿ ತಮ್ಮ ಹಲ್ಕಾ ಪ್ಲ್ಯಾನ್ ಗಳ  ಬಗ್ಗೆ ಆರೋಪಿಗಳು ಚರ್ಚಿಸುತ್ತಿದ್ದರು ಎನ್ನಲಾಗಿದೆ .

ದಿವ್ಯ ಐಷಾರಾಮಿ ಬದುಕಿನ ಬಗ್ಗೆ ಹಲವರಿಗೆತ್ತು ಅನುಮಾನ

ಕೆಲವೇ ಕೆಲವು ವರ್ಷಗಳ ಹಿಂದೆ ಮಾಧ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ದಿವ್ಯ ವಸಂತ ಸದ್ಯ ಹೈ ಫೈ ಲೈಫ್ ಲೀಡ್ ಮಾಡ್ತಿದ್ಳು,.ಆಕೆಯ ಜೀವನ ಶೈಲಿ ಹಲವರಿಗೆ ಅನುಮಾನ ಮೂಡಿಸಿತು. ಆರಂಭದ ದಿನದಲ್ಲಿ ಊಟ, ಬಟ್ಟೆಗೆ ಪರದಾಡುತ್ತಿದ್ದ ಈಕೆ ಕೆಲವೇ ಕೆಲವು ವರ್ಷಗಳಲ್ಲಿ ಹೀಗೆ ಐಷಾರಾಮಿ ಕಾರು, ಐ ಫೋನ್ ಅದು ಇದು ಅಂತಾ ಹೈಫೈ ಜೀವ್ನ ಹೇಗೆ ನಡೆಸ್ತಿದ್ಳು ಅನ್ನೋ ಅನುಮಾನ ಮೂಡಿತ್ತು. ಅಲ್ಲದೇ ಖಾಸಗಿ ವಾಹಿನಿಯಲ್ಲಿ ಬರುತ್ತಿದ್ದ ಕೆಲವೇ ಕೆಲವು ಸಾವಿರ ಸಂಬಳದಲ್ಲಿ ಇದೆಲ್ಲಾ ಹೇಗೆ ಮಾಡೋದಕ್ಕೆ ಆಗುತ್ತೆ.  ಮೀಡಿಯಾದಲ್ಲಿ 15-20 ವರ್ಷ ಕೆಲಸ ಮಾಡಿದ್ರೂ ಬರೋ ಸಂಬಳ ಸಾಕಾಗಲ್ಲ. ತಿಂಗಳ ಕೊನೇಲಿ ಜೇಬು ಖಾಲಿಯಾಗುತ್ತೆ. ಇಂತಹದ್ರಲ್ಲಿ ಈಕೆ ಹೀಗೆಲ್ಲಾ ಹೇಗೆ ಬದುಕೋಕೆ ಸಾಧ್ಯವಾಗುತ್ತೆ ಅಂತಾ ಮಾತನಾಡಿಕೊಳ್ಳುತ್ತಿದ್ದರು. ಅಲ್ಲದೇ ಕಲರ್ಸ್ ವಾಹಿನಿಯ ಗಿಚ್ಚಿ ಗಿಲಿ ಗಿಲಿ ಶೋಗೆ ಹೋದ ಮೇಲೆ ಆಕೆಯ ಐಷಾರಾಮಿ ಬದುಕಿನ ದುರಾಸೆ ಹೆಚ್ಚಾಯ್ತು ಆಕೆಯ ಆಪ್ತರು ಹೇಳುತ್ತಿದ್ದಾರೆ. ಅದಕ್ಕಾಗೆ ಇಂತಹ ಅಡ್ಡದಾರಿಗಳನ್ನು ಹಿಡಿದಿದ್ದಳು ಎನ್ನಲಾಗಿದೆ.

ಇದುವರೆಗೂ ವೈದ್ಯರು ಸೇರಿ 100ಕ್ಕೂ ಹೆಚ್ಚಿನವರಿಂದ ಸುಲಿಗೆ

ಇನ್ನು ದಿವ್ಯಾ ಆಂಡ್ ಗ್ಯಾಂಗ್ ಇದುವೆರಗೂ ವೈದ್ಯರು ಸೇರಿ 100ಕ್ಕೂ ಹೆಚ್ಚಿನ ಜನರನ್ನು ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.  ಇನ್ನು ಎ1 ಆರೋಪಿ ವೆಂಕಟೇಶ್ ಆರಂಭದಲ್ಲಿ  ಯೂಟ್ಯೂಬ್‌ನಲ್ಲಿ ತನ್ನದೇ ಚಾನಲ್ ಅನ್ನು ಮಾಡಿಕೊಂಡಿದ್ದ. ಆ ಚಾನೆಲ್‌ಗೆ ಸಂದರ್ಶನಕ್ಕಾಗಿ ಬಂದ ದಿವ್ಯಾ ಆತನಿಗೆ ಕ್ಲೋಸ್ ಆಗಿದ್ದಳು. ಆಕೆಯನ್ನು ಆತ ನನ್ನ ಮಗಳು ಎಂದು ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ. ಅಲ್ಲದೇ ಆಗಾಗ್ಗೆ ಆಕೆಯ ಮನೆಗೆ ಬರುತ್ತಿದ್ದ. ಕುಟುಂಬಸ್ಥರೊಂದಿಗೆ ಆತ್ಮೀಯವಾಗಿದ್ದ. ಅಲ್ಲದೇ ಆಕೆಯ ಕೆಲವು ವೀಡಿಯೋಗಳಲ್ಲೂ ಕಾಣಿಸಿಕೊಂಡಿದ್ದ. ಈ ಗೆಳೆತನದಲ್ಲೇ ಇಬ್ಬರು ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಸಾಜ್ ಪಾರ್ಲ‌ಗಳು ಹಾಗೂ ವೈದ್ಯರು ಸೇರಿ ಹಣವಂತರಿಗೆ ಹನಿಟ್ರ್ಯಾಪ್ ರೀತಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡುತ್ತಿದ್ರು. ಇದುವರೆಗೆ ಸುಮಾರು 100ಕ್ಕೂ ಹೆಚ್ಚಿನ ಜನರಿಂದ ಈ ತಂಡ ಸುಲಿಗೆ ಮಾಡಿದೆ. ಸಂತ್ರಸ್ತರಿಂದ 80 ಸಾವಿರ, 50 ಸಾವಿರ ಹಾಗೂ 1 ಲಕ್ಷ ರು.ವರೆಗೆ ಆನ್‌ಲೈನ್‌ ಮೂಲಕ ತಮ್ಮ ಖಾತೆಗಳಿಗೆ ವೆಂಕಟೇಶ್‌ ಹಾಗೂ ದಿವ್ಯಾ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆ ಯಾಗಿದೆ

ದಿವ್ಯಾ ಮನೆಗೆ ಪೊಲೀಸರ ದಾಳಿ ಅಕ್ಕ ಎಸ್ಕೇಪ್

ಘಟನೆ ಬೆಳಕಿಗೆ ಬರುತ್ತಿದ್ದಂತೆ ಲಗ್ಗೆರೆಯಲ್ಲಿರುವ ದಿವ್ಯಾ ಮನೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಅರೆಸ್ಟ್ ಆಗೋ ಭಯದಲ್ಲಿದ್ದ ದಿವ್ಯಾ, ಮನೆಯಲ್ಲಿದ್ದ ಕ್ಯಾಮೆರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತು ಗಳನ್ನು ತೆಗೆದುಕೊಂಡು ಕಾರಿನಲ್ಲಿ ಎಸ್ಕೇಪ್ ಆಗಿದ್ದಾಳೆ.

ಮಕ್ಕಳ ಘನಂದಾರಿ ಕೆಲಸಕ್ಕೆ ಪೊಲೀಸ್ ಠಾಣೆಯಲ್ಲಿ ತಾಯಿ ಕಣ್ಣೀರು

ಇನ್ನು ದಿವ್ಯಾ ಸಹೋದರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ರೆ ದಿವ್ಯಾ ಎಸ್ಕೇಪ್ ಆಗಿದ್ದಾಳೆ. ಇದರಿಂದ ತೀವ್ರ ನೊಂದಿರುವ ದಿವ್ಯಾ ತಾಯಿ ವಸಂತ ಜೆ ಬಿ ನಗರ ಪೊಲೀಸ್ ಠಾಣೆಯಲ್ಲಿ ಕಣ್ಣೀರು ಹಾಕಿದ್ದಾರೆ. ತಾನು ಮನೆಗಳಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕಿದ್ದೇನೆ. ವೆಂಕಟೇಶ್‌ನಿಂದಲೇ ದಿವ್ಯಾ ತಪ್ಪು ದಾರಿ ತುಳಿದಿದ್ದಾಳೆ ಎಂದಿದ್ದಾರಂತೆ.ಆದ್ರೆ ಮಗಳ ಜೊತೆ ನೀವು ರೀಲ್ಸ್ ಮಾಡುತ್ತಾ ಆಕೆ ಮಾಡುತ್ತಿದ್ದ ಹುಚ್ಚಾಟಗಳಿಗೆ ಸಪೋರ್ಟ್ ಮಾಡುವ ಬದಲು ಅವತ್ತೇ ಕಿವಿ ಹಿಂಡಿದ್ರೆ ಹೀಗೆಲ್ಲಾ ಆಗ್ತಿತ್ತಾ ಅಂತಾ ಜನ ಮಾತಾಡುತ್ತಿದ್ದಾರೆ. ನಿಮ್ಮ ಜೊತೆನೇ ಇರೋ ಇಬ್ಬರು ಮಕ್ಕಳು ಇಂತಹ ಕೆಲಸ ಮಾಡುವಾಗ ಸಣ್ಣ ಅನುಮಾನವೂ ನಿಮಗೆ ಬರ್ಲಿಲ್ವಾ? ನೀವು ಈಗ ಕಣ್ಣೀರು ಸುರಿಸಿ ಏನ್ ಪ್ರಯೋಜನ ಎಂದು ಜನ ಪ್ರಶ್ನಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!