- Advertisement -
- Advertisement -
ಮಂಗಳೂರು; ಉಜ್ಜೈಯಿನಿ ಆಯೋಸಿದ್ದ 2023-24 ನೇ ಆರ್ಟ್ ಕಾಲೇಜುಗಳ ಚಿತ್ರಕಲಾ ಸ್ಪರ್ಧೆಯಲ್ಲಿ ಪುತ್ತೂರಿನ ಸದ್ಯ ಮಂಗಳೂರಿನಲ್ಲಿ ವಾಸವಿರುವ ಧಾರಿಣಿ ರಾಜೇಶ್ ರಾವ್ ಚಿನ್ನದ ಪದಕ ಗೆದ್ದಿದ್ದಾರೆ.
ಧಾರಿಣಿ ರಾಜೇಶ್ ರಾವ್ ಮಂಗಳೂರಿನ ಮಹಾಲಸ ಕಾಲೇಜ್ ಆಫ್ ವಿಶುವಲ್ ಆರ್ಟ್ಸ್ ನಲ್ಲಿ ತೃತೀಯ ವರ್ಷದ ವಿದ್ಯಾರ್ಥಿನಿ. ಉಜ್ಜೈಯಿನಿ ಕಲಾವ್ ನ್ಯಾಸ್ ಸಂಸ್ಥೆ ಈ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು.ಕ್ರಿಯೇಟಿವ್ ವಿಭಾಗದಲ್ಲಿ ಧಾರಿಣಿ ರಾಜೇಶ್ ರಾವ್ ಅವರು ಬಿಡಿಸಿದ ಚಿತ್ರಕ್ಕೆ ಚಿನ್ನದ ಪದಕ ಲಭಿಸಿದೆ.
ಧಾರಿಣಿ ರಾಜೇಶ್ ರಾವ್ ಪತ್ರಕರ್ತ ರಾಜೇಶ್ ರಾವ್ ಹಾಗೂ ಸ್ವಪ್ನ ರಾಜೇಶ್ ದಂಪತಿ ಪುತ್ರಿ.
- Advertisement -