Thursday, May 16, 2024
Homeಕರಾವಳಿಬೆಂಗಳೂರು ಯುವಕನ ಕಿಡ್ನಾಪ್ & ಕೊಲೆ ಪ್ರಕರಣ: ಮೂರನೇ ದಿನ ಚಾರ್ಮಾಡಿ ಘಾಟ್ ನಲ್ಲಿ ಶವಕ್ಕಾಗಿ...

ಬೆಂಗಳೂರು ಯುವಕನ ಕಿಡ್ನಾಪ್ & ಕೊಲೆ ಪ್ರಕರಣ: ಮೂರನೇ ದಿನ ಚಾರ್ಮಾಡಿ ಘಾಟ್ ನಲ್ಲಿ ಶವಕ್ಕಾಗಿ ಹುಡುಕಾಟ,:ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸಿದ ಪೊಲೀಸರ ತಂಡ

spot_img
- Advertisement -
- Advertisement -

ಬೆಳ್ತಂಗಡಿ :ಸುಮಾರು ಒಂಬತ್ತು ತಿಂಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಕೊಲೆ ಮಾಡಿದ ಯುವಕನ ಶವವನ್ನು ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಎಸೆಯಲಾಗಿದೆ ಎಂದು ಆರೋಪಿಗಳು ತಿಳಿಸಿದ್ದು ಅದರಂತೆ ಬೆಂಗಳೂರು ಕಬ್ಬನ್ ಪಾರ್ಕ್ ಎಸಿಪಿ ರಾಜೇಂದ್ರರವರ ನೇತೃತ್ವದಲ್ಲಿ ಶವ ಪತ್ತೆಹಚ್ಚುವ ಕಾರ್ಯಾಚರಣೆ ನಡೆಸಲಾಗಿದ್ದು ಮೂರನೇ ದಿನದ ಕಾರ್ಯಾಚರಣೆಯಲ್ಲಿ ಯಾವುದೇ ಸುಳಿವು ಪತ್ತೆಯಾಗಿಲ್ಲ.ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಬೆಂಗಳೂರಿಗೆ ಪೊಲೀಸರ ತಂಡ ವಾಪಸಾಗಿದ್ದಾರೆ.

ಶವ ಹುಡುಕಾಟ ಕಾರ್ಯಾಚರಣೆ:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಘಾಟ್ ಪ್ರದೇಶಗಳ ಕಣಿವೆಗಳಲ್ಲಿ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ(ರಿ)ಯ ಫೀಸ್ ಮೋನು , ಅರೀಫ್ ಬಣಕಲ್, ಅಬ್ದುಲ್ ರಹಿಮಾನ್, ಅಶೀಕ್, ರಹೀಂ, ಅಹಮ್ಮದ್ ಭಾವ, ಉಮಾರ್ ಹಾಗೂ ಬೆಳ್ತಂಗಡಿಯ ಬಾಬಾ ಅಂಬುಲೆನ್ಸ್ ಜಲೀಲ್ ಮತ್ತಿತರರ ಸಹಕಾರದಲ್ಲಿ ಜ.3 ರಿಂದ ಜ.5 ರವರೆಗೆ ಮೂರು ದಿನ ಪೂರ್ತಿಯಾಗಿ ಹುಡುಕಾಟ ನಡೆಸಲಾಗಿತ್ತು.ಈ ವೇಳೆ ಸತ್ತ ಪ್ರಾಣಿಗಳ ಕುರುಹುಗಳು ಜಾಸ್ತಿಯಾಗಿ ಪತ್ತೆಯಾಗಿತ್ತು. ಅದಲ್ಲದೆ  ಕಾಡಿನ ಸುತ್ತಮುತ್ತ ಹಾಗೂ ನೀರು ಹಾರಿದು ಹೋಗುವ ಹಲ್ಲುಗಳ ನಡುವೆ ಇಂಚಿಂಚು ಹುಡುಕಾಟ ನಡೆಸಲಾಗಿದ್ದರೂ ಈವರೆಗೆ ಯಾವುದೇ ಶವದ ಸುಳಿವು ಪತ್ತೆಯಾಗಿಲ್ಲ.

ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ:
ಜ.6 ರಂದು ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗುವ ಕಾರಣ ಮೂರು ದಿನ ಶವ ಪತ್ತೆ ಕಾರ್ಯಾಚರಣೆ ನಡೆಸಿದ ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಜ.5 ರಂದು ಸಂಜೆ ಕಾರ್ಯಾಚರಣೆ ಸ್ಥಗಿತಗೊಳಿಸಿ ಬೆಂಗಳೂರಿಗೆ ಇಬ್ಬರು ಆರೋಪಿಗಳಾದ ಶರತ್ ಮತ್ತು ಧನುಷ್ ನನ್ನು ಕರೆದುಕೊಂಡು ಹೋಗಿದ್ದಾರೆ. ಮತ್ತೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದು ಆರೋಪಿಗಳನ್ನು ಕರೆದುಕೊಂಡು ಬಂದು ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮತ್ತೆ ಶವಪತ್ತೆ ಕಾರ್ಯಾಚರಣೆ ಆರಂಭಿಸಲಿದ್ದಾರೆ.

ಶವ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸರ ತಂಡ:

ಕಬ್ಬನ್ ಪಾರ್ಕ್ ಎಸಿಪಿ ಡಿ.ಎಸ್.ರಾಜೇಂದ್ರ , ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚೈತನ್ಯ , ಅಶೋಕ್ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಶ್ವಿನಿ‌.ಜಿ.ಎ ,ಎಎಸ್ಐ ಹರಿಚಂದ್ರ, ಎಎಸ್ಐ ರೇಣುಕಾ ಮತ್ತು ಸಿಬ್ಬಂದಿ ನಂದೀಶ್, ವಸಂತ, ಜಾಂಕೀರ್, ಲೋಕೇಶ್, ಸೋಮು ಲಮಾಣಿ, ಪ್ರಮೋದ್ ಶವಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!