ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಪಸ್ ತೆರಳಲು ಹೆಲಿಪ್ಯಾಡ್ ನಲ್ಲಿ ಹೆಲಿಕಾಫ್ಟರ್ ಪೈಲಟ್ ಗಾಗಿ ಕಾಯಬೇಕಾದ ಘಟನೆ ಇಂದು ಬೈಂದೂರಿನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಬೆಂಗಳೂರಿನಿಂದ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಗೆ ಹೆಲಿಕಾಫ್ಟರ್ ನಲ್ಲಿ ಬಂದಿಳಿದಿದ್ದ ಡಿ.ಕೆ. ಶಿವಕುಮಾರ್ ಬಳಿಕ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತೆರಳಿದ್ದರು.
ಕೊಲ್ಲೂರಿನಲ್ಲಿ ದೇವರ ದರ್ಶನದ ಬಳಿಕ ಮಧ್ಯಾಹ್ನ 1.30 ಗೆ ಅರೆಶಿರೂರು ಹೆಲಿಪ್ಯಾಡ್ ನಿಂದ ಡಿಸಿಎಂ ಗೋಕರ್ಣದ ಇಡಗುಂಜಿಗೆ ಪ್ರಯಾಣ ನಿಗದಿಯಾಗಿತ್ತು.
ಆದರೆ ಕೊಲ್ಲೂರಿನಲ್ಲಿ ದೇವರ ದರ್ಶನ ಪಡೆದ ಡಿ.ಕೆ. ಶಿವಕುಮಾರ್ ಮಧ್ಯಾಹ್ನ 12.10 ಕ್ಕೆ ಹೆಲಿಪ್ಯಾಡ್ ಗೆ ವಾಪಾಸಾಗಿದ್ದರು. ಆದರೆ ಆ ಸಮಯದಲ್ಲಿ ಹೆಲಿಪ್ಯಾಡ್ ಪೈಲಟ್ ಇಲ್ಲದಿದ್ದ ಕಾರಣ ಹೆಲಿಕಾಫ್ಟರ್ ಹಾರಾಟಕ್ಕೆ ಸಿದ್ಧವಾಗಿರಲಿಲ್ಲ.
ಸುಮಾರು ಇಪ್ಪತ್ತು ನಿಮಿಷಗಳ ಕಾಲ ಡಿಸಿಎಂ ಡಿ.ಕೆ. ಶಿವಕುಮಾರ್ ಹೆಲಿಪ್ಯಾಡ್ ನಲ್ಲಿ ಕಾಯ್ದ ಬಳಿಕ 12.30ರ ವೇಳೆಗೆ ಪೈಲಟ್ ಹೆಲಿಪ್ಯಾಡ್ ಗೆ ಬಂದಿದ್ದು ನಂತರ ತರಾತುರಿಯಲ್ಲಿ ಹೆಲಿಕಾಫ್ಟರ್ ಟೇಕಾಫ್ ಮಾಡಲಾಗಿದೆ.ನಂತರ ಡಿ.ಕೆ. ಶಿವಕುಮಾರ್ ಅರೆಶಿರೂರು ಹೆಲಿಪ್ಯಾಡ್ ನಿಂದ ಇಡಗುಂಜಿಗೆ ಪ್ರಯಾಣ ಬೆಳೆಸಿದರು.