Tuesday, May 7, 2024
Homeಕರಾವಳಿಮಂಗಳೂರು : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಅಭಯ ನೀಡಿದ ಕುಡುಂಬೂರು ನಡುಗಿರಿ ಪಿಲಿ ಚಾಮುಂಡಿ...

ಮಂಗಳೂರು : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಅಭಯ ನೀಡಿದ ಕುಡುಂಬೂರು ನಡುಗಿರಿ ಪಿಲಿ ಚಾಮುಂಡಿ ದೈವ

spot_img
- Advertisement -
- Advertisement -

ಮಂಗಳೂರು : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ಪಿಲಿ ಚಾಮುಂಡಿ ದೈವ  ಅಭಯ ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬೈಕಂಪಾಡಿಯ ಕುಡುಂಬೂರಿನ ನಡುಗಿರಿಯಲ್ಲಿ ಪಿಲಿ ಚಾಮುಂಡಿ ದೈವ ನೇಮೋತ್ಸವ ನಡೆದಿತ್ತು. ಅಲ್ಲಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತೆರಳಿದ್ದರು. ಈ ವೇಳೆ ಪಿಲಿ ಚಾಮುಂಡಿ ದೈವ ಡಿಸಿ ಮೈ ನೇವರಿಸಿದೆ. ಇದೇ ಸಂದರ್ಭದಲ್ಲಿ ಡಿಸಿ ಅವರು ದಯಾನಂದ ಕತ್ತಲೆಸಾರ್ ಅವರಿದಂ ದೈವಾರಾಧನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಇನ್ನು ಕುಡುಂಬೂರಿನ ಈ ಶ್ರೀ ಜಾರಂದಾಯ ಮತ್ತು ಪರಿವಾರ ದೈವಗಳ ಕ್ಷೇತ್ರ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಕೈಗಾರಿಕಾ ಪ್ರದೇಶಗಳಿಗಾಗಿ ಊರೇ ಖಾಲಿಯಾದರೂ ಇಲ್ಲಿನ ದೈವಾರಾಧನೆ ಮೂವತ್ತು ವರ್ಷಗಳ ನಂತರ ಜೀರ್ಣೋದ್ದಾರ ಗೊಂಡು ಪುನರಪಿ ಆರಂಭಗೊಂಡಿದೆ. ಪಂಚ ಧರ್ಮದೈವಗಳು ಈ ಊರನ್ನು ಮತ್ತು ಜನತೆಯನ್ನು ಕಾಯುತ್ತಿದೆ ಅನ್ನೋದು ಜನರ ನಂಬಿಕೆ.

- Advertisement -
spot_img

Latest News

error: Content is protected !!